Site icon Vistara News

Karnataka live news: ವಿಪಕ್ಷ ಮಿತ್ರಕೂಟದ ಹೊಸ ಹೆಸರು INDIA

Karnataka Live News Updates Today

ಪ್ರತಿಪಕ್ಷಗಳ ಮಿತ್ರಕೂಟವಾದ ಯುಪಿಎಯ ಹೆಸರನ್ನು INDIA ಎಂಬು ಬದಲಿಸಲಾಗಿದೆ. I – Indian, N – National, D – Democractic, I – Inclusive, A – Alliance ಎನ್ನುವುದು ಕೂಟದ ಹೊಸ ಹೆಸರು.

Prabhakar R

ಮರವಂತೆ ಬೀಚ್‌ನಲ್ಲಿ ಪ್ರವಾಸಿಗ ಸಮುದ್ರ ಪಾಲು

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಬೀಚ್‌ನಲ್ಲಿ ಅಲೆಗಳ ತೀವ್ರತೆ ಅರಿಯದೆ ಸಮುದ್ರಕ್ಕಿಳಿದ ಪ್ರವಾಸಿಗ ನೀರುಪಾಲಾಗಿದ್ದಾನೆ. ಗದಗ ಮೂಲದ ಮೆವಂಡಿ ಗ್ರಾಮದ ಫೀರ್ ನದಾಫ್‌ ಸಮುದ್ರಪಾಲಾದ ಯುವಕ. ಪ್ರವಾಸದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಗೆ ಪ್ರವಾಸಿಗ ಆಗಮಿಸಿದ್ದ. ಅಲೆಗಳ ರಭಸಕ್ಕೆ ನೀರಿನಲ್ಲಿ ಕೊಚ್ಚಿಕೊಂಡು ಹೋದ ಹಿನ್ನೆಲೆಯಲ್ಲಿ ಫೀರ್ ನದಾಫ್‌ಗಾಗಿ ಬೈಂದೂರು ಅಗ್ನಿಶಾಮಕ ದಳ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

Drowns in Sea: ಮರವಂತೆ ಬೀಚ್‌ನಲ್ಲಿ ಪ್ರವಾಸಿಗ ಸಮುದ್ರ ಪಾಲು
Prabhakar R

ಕಾಂಗ್ರೆಸ್‌ ಜತೆಗಿನ ಪಕ್ಷಗಳನ್ನು ʼತುಂಡರಸರುʼ ಎಂದ ಬಿಜೆಪಿ: ಈಸ್ಟ್‌ INDIAಗೆ ಹೋಲಿಕೆ!

ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಲು ಬೆಂಗಳೂರಿನಲ್ಲಿ ಸೇರಿದ್ದ ಪ್ರತಿಪಕ್ಷಗಳು ಮೈತ್ರಿಕೂಟಕ್ಕೆ INDIA ಎಂದು ಹೆಸರಿಟ್ಟಿವೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕರ್ನಾಟಕ ಬಿಜೆಪಿ, ವಿಪಕ್ಷಗಳ ಮೈತ್ರಿಕೂಟವನ್ನು ಈಸ್ಟ್‌ ಇಂಡಿಯಾ ಕಂಪನಿಗೆ ಹೋಲಿಕೆ ಮಾಡಿದೆ.

NDA vs INDIA: ಕಾಂಗ್ರೆಸ್‌ ಜತೆಗಿನ ಪಕ್ಷಗಳನ್ನು ʼತುಂಡರಸರುʼ ಎಂದ ಬಿಜೆಪಿ: ಈಸ್ಟ್‌ INDIAಗೆ ಹೋಲಿಕೆ!
Deepa S

ಕರಾವಳಿ ಸೇರಿ ಈ 9 ಜಿಲ್ಲೆಗಳಲ್ಲಿ ನಾಳೆ ಭಾರಿ ಮಳೆ ಸಾಧ್ಯತೆ

ಕರ್ನಾಟಕ ಕರಾವಳಿಯಲ್ಲಿ ಭಾರೀ ಮಳೆಯಾಗುವ (Rain News) ಸಾಧ್ಯತೆ ಇದ್ದು, ಮಲೆನಾಡು ಜಿಲ್ಲೆಗಳಲ್ಲಿ ಧಾರಾಕಾರ ಮಳೆ (Weather report) ಸುರಿಯಲಿದೆ. ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Weather Update) ಮುನ್ಸೂಚನೆಯನ್ನು ನೀಡಿದೆ.

Weather Report : ಕರಾವಳಿ ಸೇರಿ ಈ 9 ಜಿಲ್ಲೆಗಳಲ್ಲಿ ನಾಳೆ ಭಾರಿ ಮಳೆ ಸಾಧ್ಯತೆ
Deepa S

ರಕ್ತ ಸಂಬಂಧಿಗಳ ಕ್ರೌರ್ಯಕ್ಕೆ ಪ್ರಾಣ ಬಿಟ್ಟ ಬೆಂಗಳೂರು ಹುಡುಗ

ಪ್ರೀತಿ ವಿಚಾರಕ್ಕೆ ರಕ್ತ ಸಂಬಂಧಿಗಳೇ ಕಾಲೇಜು ವಿದ್ಯಾರ್ಥಿಯನ್ನು ಕಿಡ್ನ್ಯಾಪ್‌ ಮಾಡಿ ಕೈ-ಕಾಲು ಕಟ್ಟಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರು. ಮೂರು ದಿನಗಳು ಜೀವನ್ಮರಣ ಹೋರಾಟ ನಡೆಸಿದ ಶಶಾಂಕ್‌ ಚಿಕಿತ್ಸೆ ಫಲಿಸದೇ (ಜು.18) ಮಂಗಳವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.

Murder Case : ವಿದ್ಯಾರ್ಥಿಗೆ ಪೆಟ್ರೋಲ್‌ ಸುರಿದು ಬೆಂಕಿ; ರಕ್ತ ಸಂಬಂಧಿಗಳ ಕ್ರೌರ್ಯಕ್ಕೆ ಪ್ರಾಣ ಬಿಟ್ಟ
Deepa S

ಬೈಕ್‌ಗೆ ಡಿಕ್ಕಿ ಹೊಡೆದ ಟ್ರಾಕ್ಟರ್‌ ಸವಾರ ಸಾವು

ಯಾದಗಿರಿ ಜಿಲ್ಲೆಯ (yadagiri news) ಸುರಪುರ ತಾಲೂಕಿನ ಬಾದ್ಯಾಪುರ ಗ್ರಾಮದ ಬಳಿ ಮರಳು ಸಾಗಿಸುತ್ತಿದ್ದ ಟ್ರಾಕ್ಟರ್ ಬೈಕ್‌ಗೆ ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಹಾರಿ ಬಿದ್ದ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶಿವರಾಜ (35) ಮೃತ ದುರ್ದೈವಿ.

Road Accident : ಬೈಕ್‌ಗೆ ಡಿಕ್ಕಿ ಹೊಡೆದ ಟ್ರಾಕ್ಟರ್‌; ಪ್ರಾಣ ಬಿಟ್ಟ ಸವಾರ
Exit mobile version