Site icon Vistara News

BBK SEASON 10: ಯಾರಿಗೂ ಕ್ಲಾರಿಟಿ ಕೊಡಲ್ಲ ಎಂದ ವರ್ತೂರ್‌ಗೆ ಕಿಚ್ಚನ ಕ್ಲಾಸ್‌; ಹೆಚ್ಚು ವೋಟ್‌ ಯಾರಿಗೆ?

Varthur Shantosh and Kichcha Sudeep

ಬೆಂಗಳೂರು: ಈ ವಾರ ಬಿಗ್‌ ಬಾಸ್‌ (BBK SEASON 10) ಟಾಸ್ಕ್‌ಗಳಲ್ಲಿ ಹಿಂದೆ ಬಿದ್ದ ವರ್ತೂರ್​ ಸಂತೋಷ್ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ. ಆಟವನ್ನು ಸೀರಿಯಸ್​ ಆಗಿ ತಗೊಂಡಿಲ್ಲ ಎಂದು ಹೇಳಿದ್ದರಿಂದ ಇತರ ಸ್ಪರ್ಧಿಗಳ ವಿರುದ್ಧ ಅವರು ಅಸಮಧಾನ ಹೊರಹಾಕಿದ್ದರು. ಆದರೆ, ನಾನು ಯಾರಿಗೂ ಕ್ಲಾರಿಟಿ ಕೊಡಲ್ಲ, ಜನರಿಗೆ ಮಾತ್ರ ಕ್ಲಾರಿಟಿ ಕೊಡೋದು ಎಂದು ಹೇಳುತ್ತಿದ್ದ ವರ್ತೂರ್‌ಗೆ ಇದೀಗ ಕಿಚ್ಚ ಸುದೀಪ್‌ ಅವರು ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇನ್ನು ಈ ವಾರ ಅತಿ ಹೆಚ್ಚು ವೋಟ್‌ ಪಡೆದ ಸ್ಪರ್ಧಿ ಯಾರೆಂದು ಕೂಡ ತಿಳಿಸಿದ್ದಾರೆ.

ಶನಿವಾರ ರಾತ್ರಿ ನಡೆಯಲಿರುವ ʼವಾರದ ಜತೆ ಕಿಚ್ಚನ ಜತೆʼ ಸಂಚಿಕೆ ಪ್ರೋಮೋದಲ್ಲಿ ವರ್ತೂರ್‌ ಸಂತೋಷ್‌ಗೆ ಕಿಚ್ಚ ಎಚ್ಚರಿಕೆ ಕೊಟ್ಟಿರುವುದು ಕಂಡುಬಂದಿದೆ. ಕ್ಲಾರಿಟಿ ಎಂದರೆ ಏನು, ನಾನೀಗ ಯಾರಿಗೂ ಕ್ಲಾರಿಟಿ ಕೊಡಲ್ಲ, ನನಗೆ ಯಾರ ಕ್ಲಾರಿಟಿ ಬೇಕಾಗಿಲ್ಲ ಎನ್ನುತ್ತೀರಿ… ಇವತ್ತು ಒಬ್ಬರು ಟಾಪ್‌ ಸ್ಪರ್ಧಿ 72,83,090 ವೋಟ್‌ ಪಡೆದಿದ್ದಾರೆ. ಆದರೆ, ಅದು ನಿಮಗೆ ಬಂದಿದ್ದಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಈ ವಾರ ಯಾರಿಗೆ ಅತಿ ಹೆಚ್ಚು ವೋಟ್‌ ಬಂದಿದೆ ಎಂಬುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ | BBK SEASON 10: ಈ ವಾರ ತಮ್ಮ ಮನೆಗೆ ಹಿಂದಿರೋಗೋದು ಯಾರು? ನಮ್ರತಾ, ಪ್ರತಾಪ್‌ ಸೇಫ್‌!

ಕಳಪೆಯಾದ ವರ್ತೂರ್‌ ಸಂತೋಷ್‌

ಟಾಸ್ಕ್‌ನಲ್ಲಿ ಯಾವೊಬ್ಬ ಸದಸ್ಯನ ಪ್ರಯಾಣ ಸ್ಲೋ ಮೋಷನ್‌ ಆಗಿತ್ತು ಎಂಬುದನ್ನು ತಿಳಿಸಿ ಎಂದು ಬಿಗ್‌ ಬಾಸ್‌ ಆದೇಶಿಸಿದ್ದರು. ಅದೇ ರೀತಿ ಹಲವರು ವರ್ತೂರ್‌ ಅವರ ಹೆಸರನ್ನು ಹೇಳಿದರು. ಹಿಂದೆ ಉಳಿಯುತ್ತಿರುವುದು ವರ್ತೂರ್‌ ಅಂದರು ಸಂಗೀತಾ. ನಮ್ರತಾ ಹೇಳಿರುವ ಕಾರಣ ಏನೆಂದರೆ ವರ್ತೂರ್​ ಸಂತೋಷ್​ ಅವರು ಕ್ಯಾಪ್ಟನ್ಸಿ ಆಟವನ್ನು ಸೀರಿಯಸ್​ ಆಗಿ ತಗೊಂಡಿಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ಕಾರ್ತಿಕ್​ ಅವರೂ ಸಹ ಎಲ್ಲೋ ಒಂದು ಕಡೆ ಹಿಂದೆ ಉಳಿತಿದಾರೆ ಎಂದು ಅನಿಸಿದ್ದು ವರ್ತೂರ್ ಎಂದಿದ್ದಾರೆ.

ಮನೆಯವರ ಎಲ್ಲ ಅಭಿಪ್ರಾಯ ಬಳಿಕ ವರ್ತೂರ್‌ ಕೂಡ ಗರಂ ಆದರು. ಕ್ಯಾಪ್ಟನ್ಸಿ ಅವರವರ ವೈಯಕ್ತಿಕ ವಿಚಾರ. ಕ್ಯಾಪ್ಟನ್‌ ಆಗುವುದು ಬಿಡುವುದು ಅವರ ಅವರಿಗೆ ಬಿಟ್ಟದ್ದು. ಇದನ್ನು ನಾನು ಒಪ್ಪೋದಿಲ್ಲ. ಫೈನಲ್​ನಲ್ಲಿ ಗೆದ್ದು ಹೋಗ್ತಿನಿ ಅಂದಿದ್ದಾರೆ. ಜನರು ಬೇಕಾದ್ರೆ ಉಳಿಸಿಕೊಳ್ತಾರೆ, ಇಲ್ಲಾ ಅಂದ್ರೆ ಹೊರಗಡೆ ಹಾಕ್ತಾರೆ. ನಾನು ಯಾರಿಗೂ ಕ್ಲಾರಿಟಿ ಕೊಡಲ್ಲ, ಜನಕ್ಕೆ ಮಾತ್ರ ಎಂದು ವರ್ತೂರ್ ಸಂತೋಷ್​ ಹೇಳಿದ್ದಾರೆ.

ಟಾಸ್ಕ್‌ ಏನು?

ಆಡುವ ಸದಸ್ಯರು ಚೆಂಡುಗಳನ್ನು ಹಗ್ಗದ ಮೇಲಿನಿಂದ ಉರುಳಿಸಿ ನೆಲದ ಮೇಲಿರುವ ಗಾಜಿನ ಲೋಟದ ಒಳಗೆ ಹಾಕಬೇಕು. ತಮಗೆ ಮೀಸಲಿರುವ ಮೂರು ಲೋಟಗಳ ನಡುವೆ ತಲಾ ಒಂದು ಚೆಂಡನ್ನು ಹಾಕುವ ಸದಸ್ಯ ಈ ಟಾಸ್ಕ್‌ನಲ್ಲಿ ಗೆದ್ದು ಮನೆಯ ಕ್ಯಾಪ್ಟನ್‌ ಆಗುತ್ತಾರೆ.

ಇದನ್ನೂ ಓದಿ | BBK SEASON 10: ಎಲ್ಲೇ ಹೋದರೂ ನನ್ನ ಗುರುತಿಸುತ್ತಾರೆ, ಸೆಲ್ಫಿ ಕೇಳ್ತಾರೆ ಎಂದ ಪ್ರತಾಪ್ ತಂದೆ

ತನಿಷಾ ಅವರು ಈ ಟಾಸ್ಕ್‌ ಗೆದ್ದು ಮನೆಗೆ ಕ್ಯಾಪ್ಟನ್‌ ಆದರು. ವರ್ತೂರ್‌ ಸಂತೋಷ್‌ ಕಳಪೆ ಪಟ್ಟ ಪಡೆದಿದ್ದಾರೆ. ಇದಾದ ಬಳಿಕ ಬಿಗ್‌ ಬಾಸ್‌ ತನಿಷಾ ಅವರಿಗೆ ಫ್ಯಾಮಿಲಿ ಫೋಟೊವನ್ನು ಕಳುಹಿಸಿದರು. ತನಿಷಾ ಕ್ಯಾಮೆರಾ ಮುಂದೆ ಮಾತನಾಡಿ ʻʻನನ್ನ ಫ್ಯಾಮಿಲಿ, ನನ್ನ ತಂದೆಯನ್ನು ತೋಡಲು ನಿಮ್ಮಿಂದ (ಬಿಗ್‌ ಬಾಸ್‌) ಆಯ್ತು. ಅದು ನಿಜವಾಗಲೂ ಖುಷಿ ಕೊಟ್ಟಿದೆ. ನನ್ನ ತಂದೆ ನನ್ನ ಶೋ ನೋಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ನನಗೆ ಈ ಫೋಟೊ ನೋಡಿ ತುಂಬ ಖುಷಿ ಕೊಟ್ಟಿತುʼʼಎಂದರು.

Exit mobile version