Site icon Vistara News

Wild animal Attack : ಕಾಡು ಪ್ರಾಣಿ ದಾಳಿಗೆ ಯೋಧ ಸಾವು; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

Soldier Death in wild animal attack

ಕೋಲಾರ: ಕಾಡು ಪ್ರಾಣಿ ದಾಳಿಗೆ (Wild animal Attack) ಸಿಲುಕಿ ಕೋಲಾರ ಮೂಲದ ಯೋಧ ಹುತಾತ್ಮರಾಗಿದ್ದಾರೆ. ಹರ್ಶಿತ್ ಪ್ರಸನ್ನ (22) ಮೃತ ದುರ್ದೈವಿ.

ಕೋಲಾರ ನಗರದ ಗಲ್ ಪೇಟೆ ನಿವಾಸಿ ಹರ್ಶಿತ್ ಪ್ರಸನ್ನ ಅವರು ಗುಜರಾತ್‌ನ ಜಾಮ್‌ನಗರ್‌ನಲ್ಲಿ ನೌಕಾಪಡೆಯಲ್ಲಿ SEAMEN ಆಗಿ ಕೆಲಸ ಮಾಡುತ್ತಿದ್ದರು. ಮಾ.12ರಂದು ಕಾಡು ಪ್ರಾಣಿ ಕೊಂಬು ತಿವಿದು ಮೃತಪಟ್ಟಿದ್ದಾಗಿ ಅಧಿಕಾರಿಗಳು ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಹರ್ಶಿತ್‌ 2019ರಲ್ಲಿ ನೌಕಾಪಡೆಗೆ ಆಯ್ಕೆಯಾಗಿ 3 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು. ಕೋಲಾರ ನಗರಕ್ಕೆ ತಡರಾತ್ರಿ ಆಗಮಿಸಿದ ಯೋಧನ ಪಾರ್ಥೀವ ಶರೀರ ಬಂದಿದೆ. ಮಗನ ಸಾವಿಗೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಗುರುವಾರದಂದು ಕೋಲಾರ ನಗರದಲ್ಲಿ ನೌಕಾಪಡೆಯ ಅಧಿಕಾರಿಗಳ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಇದನ್ನೂ ಓದಿ: Exam Fear : ಪರೀಕ್ಷೆ ಭಯ; ಡೆತ್‌ನೋಟ್‌ ಬರೆದಿಟ್ಟು ಯುವಕ ನೇಣಿಗೆ ಶರಣು

Road Accident : ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

ಬೆಂಗಳೂರು: ನಿಯಂತ್ರಣ ತಪ್ಪಿ ಬಿದ್ದ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ (road Accident) ಬೆಂಗಳೂರಲ್ಲಿ ನಡೆದಿದೆ. ಮಹಮದ್ ಅಲಿ (18) ಮೃತ ಬೈಕ್ ಸವಾರನಾಗಿದ್ದಾನೆ.

ಕಳೆದ ಬುಧವಾರ ರಾತ್ರಿ ಬಿಇಎಲ್ ಸರ್ಕಲ್ ಸಮೀಪ ಫ್ಲೈ ಓವರ್ ಕೆಳಗೆ ಬೈಕ್‌ನಲ್ಲಿ ಹೋಗುತ್ತಿದ್ದ ಮಹಮದ್‌ ಅಲಿಗೆ ನಿಯಂತ್ರಣ ತಪ್ಪಿದೆ. ಕೆಳಗೆ ಬಿದ್ದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ಮಹಮದ್‌ನನ್ನು ಅಲ್ಲಿದ್ದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಮಹಮದ್‌ ಅಪಘಾತದಲ್ಲಿ ಮೃತಪಟ್ಟಿದ್ದಾನೆ.

ಮಹಮದ್‌ ಅಲಿ ಶಿವಾಜಿನಗರ ನಿವಾಸಿ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಜಾಲಹಳ್ಳಿ ಸಂಚಾರಿ ಪೊಲೀಸರು ಭೇಟಿ ನೀರಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಜಾಲಹಳ್ಳಿ ಸಂಚಾರಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version