Site icon Vistara News

Koppala News: ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆ ರಾಡ್‌ನಿಂದ ಹಲ್ಲೆ; ಎಫ್ಐಆರ್ ದಾಖಲು

Policeman on night patrol attacked

ಗಂಗಾವತಿ: ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸರ (Police) ಮೇಲೆ ಒಂದೇ ಬೈಕಿನಲ್ಲಿ (Bike) ಬಂದ ಮೂವರು ಯುವಕರು ಮಾರಣಾಂತಿಕ ಹಲ್ಲೆ ಮಾಡಿ ಎಸ್ಕೇಪ್ ಆಗಿರುವ ಘಟನೆ ಗಂಗಾವತಿ ನಗರದ ಗಾಂಧಿ ವೃತ್ತದ ಡೈಲಿ ಮಾರ್ಕೆಟ್‌ ಬಳಿ ನಡೆದಿದೆ.

ನಗರ ಠಾಣೆಯ ಶರಣಪ್ಪಗೌಡ ಮತ್ತು ಶಿವರಾಜ ಹರಿಜನ ಎಂಬ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ. ಶರಣಪ್ಪಗೌಡ ಎಂಬುವವರ ತಲೆ ಮತ್ತು ಮುಖಕ್ಕೆ ಭಾರಿ ಗಾಯಗಳಾಗಿವೆ.

ಇದನ್ನೂ ಓದಿ: Team India Cricket: ಟೀಮ್​ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ ಅಡಿಡಾಸ್ ಲೋಗೊ; ಕಾರಣ ಏನು?

ಘಟನೆ ವಿವರ

ನಗರದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಸಮೀಪ ಗೇಮಿಂಗ್ ಸೆಂಟರ್ ಇದ್ದು, ರಾತ್ರಿ ಸಮಯ ಮೀರಿದ ಬಳಿಕವೂ ಕೇಂದ್ರದಲ್ಲಿ ಯುವಕರು ಆಟವಾಡುತ್ತಿರುವುದನ್ನು ಗಸ್ತು ನಿಯೋಜಿತ ಈ ಪೊಲೀಸರು ಗಮನಿಸಿದ್ದಾರೆ. ಕೂಡಲೆ ಅಲ್ಲಿಗೆ ತೆರಳಿದ ಪೊಲೀಸರು, ಕೇಂದ್ರದ ಬಾಗಿಲು ಹಾಕುವಂತೆ ಸೂಚನೆ ನೀಡಿದ್ದಾರೆ. ಪೊಲೀಸರ ಸೂಚನೆ ಮೇರೆಗೆ ಗೇಮಿಂಗ್ ಸೆಂಟರ್ ಮಾಲೀಕ ಅಂಗಡಿ ಬಾಗಿಲು ಹಾಕಿಕೊಂಡು ಅಲ್ಲಿಂದ ಹೊರಟು ಹೋಗಿದ್ದಾರೆ.

ಇದಾದ ಬಳಿಕ ಆ ಪ್ರದೇಶದಲ್ಲಿ ಒಂದೇ ಬೈಕ್‌ನಲ್ಲಿ ಮೂವರು ಯುವಕರು ಕಿರುಚಾಡುತ್ತಾ ಒಡಾಡುತ್ತಿರುವುದನ್ನು ಬೀಟ್‌ ಪೊಲೀಸರು ಗಮನಿಸಿ, ಅವರನ್ನು ತಡೆದು ವಿಚಾರಿಸಿದ್ದಾರೆ. ಈ ವೇಳೆ ಯುವಕರು ಅಸಮಂಜಸ ಉತ್ತರ ನೀಡಿದ್ದರಿಂದ ಅನುಮಾನಗೊಂಡ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಯುವಕರು ತಮ್ಮ ಬಳಿ ಇದ್ದ ಕಬ್ಬಿಣದ ರಾಡ್‌ನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: IPL 2023 : ವಿರಾಟ್​ ಕೊಹ್ಲಿಗೆ ಗಾಯ, ಟೆಸ್ಟ್​​ ಚಾಂಪಿಯನ್​ಷಿಪ್​ ಮೊದಲೇ ಟೀಮ್​ ಇಂಡಿಯಾಗೆ ಆತಂಕ

ಸ್ವಲ್ಪ ಹೊತ್ತಿನ ಬಳಿಕ ಮತ್ತಷ್ಟು ಯುವಕರು ಗುಂಪು ಕಟ್ಟಿಕೊಂಡು ಪೊಲೀಸರಿದ್ದ ಸ್ಥಳಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ. ಸ್ಥಳಕ್ಕೆ ಸಂಚಾರಿ ಠಾಣೆಯ ಪಿಎಸ್ಐ ಸುವಾರ್ತ ತಮ್ಮ ಸಿಬ್ಬಂದಿಯೊಂದಿಗೆ ಬರುತ್ತಿದ್ದಂತೆ ಯುವಕರು ಕಾಲ್ಕಿತ್ತಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಹಲ್ಲೆಗೊಳಗಾದ ಪೊಲೀಸ್‌ ಸಿಬ್ಬಂದಿ ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಎಫ್ಐಆರ್ ದಾಖಲಾಗಿದೆ.

Exit mobile version