Site icon Vistara News

Accident News: ಕೊಪ್ಪಳದಲ್ಲಿ ಬೈಕ್‌ಗೆ ಕಾರು ಡಿಕ್ಕಿ, ಬೈಕ್‌ ಸವಾರ ಸಾವು

koppala accident

ಕೊಪ್ಪಳ: ಹಿಂಬದಿಯಿಂದ ಬೈಕ್‌ಗೆ ಕಾರ್ ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬನ್ನಿಕೊಪ್ಪ ಬಳಿ ಅಪಘಾತ ಸಂಭವಿಸಿದ್ದು, ಬೈಕ ಸವಾರ ಹಲಗೇರಿಯ ಶಿವಪ್ಪ ಬಿನ್ನಾಳ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ ಈ ದುರ್ಘಟನೆ ನಡೆದಿದೆ. ಕಾರಿನಲ್ಲಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಎರಡು ಗಂಟೆ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡವನ ರಕ್ಷಣೆ

ಎರಡು ಗಂಟೆಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳ ರಕ್ಷಿಸಿದ ಘಟನೆ ಬೆಂಗಳೂರಿನ ಬೊಮ್ಮಸಂದ್ರದಲ್ಲಿ ನಡೆದಿದೆ. ವಿಕ್ರಮ್ ಎಂಬವರು ಬೊಮ್ಮಸಂದ್ರದ ಆರ್‌ಆರ್ ಲಕ್ಸುರಿ ಪಿಜಿಯಲ್ಲಿ ವಾಸವಾಗಿದ್ದು, ಕಳೆದ ರಾತ್ರಿ 10.30ರ ಸುಮಾರಿಗೆ ಏಕಾಏಕಿ ಲಿಫ್ಟ್ ಆಫ್ ಆಗಿತ್ತು. ಈ ವೇಳೆ ಎಷ್ಟೇ ಕೂಗಾಡಿದರೂ ಪಿಜಿ ಸಿಬ್ಬಂದಿ ರಕ್ಷಣೆಗೆ ಬಂದಿಲ್ಲ. ರಾತ್ರಿ 12.30 ಆದರೂ ಯಾರೂ ಲಿಫ್ಟ್ ಕಡೆ ಸುಳಿದಿರಲಿಲ್ಲ. ಈ ವೇಳೆ ವಿಕ್ರಮ್‌ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಸಹಾಯ ಬೇಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ, ನಾಲ್ಕು ಮತ್ತು ಐದನೇ ಮಹಡಿಯ ಮಧ್ಯದಲ್ಲಿ ಲಿಫ್ಟ್‌ನಲ್ಲಿ ಸಿಲುಕಿದ್ದ ವಿಕ್ರಮ್‌ನನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: Road Accident: ನಾಯಂಡಹಳ್ಳಿ ಬಳಿ ಭೀಕರ ಅಪಘಾತಕ್ಕೆ ಮಹಿಳೆ ತಲೆ ಛಿದ್ರ; ರೊಚ್ಚಿಗೆದ್ದ ಸಾರ್ವಜನಿಕರಿಂದ ಕಲ್ಲು ತೂರಾಟ

Exit mobile version