Site icon Vistara News

ಮಹಿಳೆಗೆ ಕೊಲೆ ಬೆದರಿಕೆ ಆರೋಪ; ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು

kotturu swamiji

ಕೊಪ್ಪಳ: ಮಹಿಳೆಗೆ ಕೊಲೆ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಕಲ್ಮಠದ ಕೊಟ್ಟೂರು ಸ್ವಾಮೀಜಿ ಹಾಗೂ ಬಸಲಿಂಗಮ್ಮ ಎಂಬುವವರ ವಿರುದ್ಧ ದೂರು ದಾಖಲಾಗಿದೆ.

ಗಂಗಾವತಿ ನಿವಾಸಿ ಕಮಲಾಕ್ಷಿ ಎಂಬುವವರು ದೂರು ನೀಡಿದ್ದಾರೆ. ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಅಡುಗೆ ಸಿಬ್ಬಂದಿಯಾದ ತಾವು ಕೆಲಸಕ್ಕೆ ಹೋಗಿದ್ದಾಗ ನೀನ್ಯಾಕೆ ಇಲ್ಲಿಗೆ ಬಂದಿದ್ದೀಯಾ? ಕಲ್ಮಠದ ಸ್ವಾಮೀಜಿಗೆ ಹೇಳಿ ನಿನ್ನನ್ನು ಕೆಲಸದಿಂದ ತೆಗೆಸುತ್ತೇನೆ. ಸ್ವಾಮೀಜಿ ಬಳಿ ಪಿಸ್ತೂಲ್‌ ಇದೆ, ಅದು ನನ್ನ ಬಳಿಯೇ ಇದೆ. ನಿನ್ನ ಗಂಡ ಹಾಗೂ ಮಗನನ್ನು ಕೊಲೆ ಮಾಡಿಸುತ್ತೇನೆ ಎಂದು ಬಸಲಿಂಗಮ್ಮ ಎಂಬುವವರು ಹಲ್ಲೆ ಮಾಡಿದ್ದಾರೆ. ಬಳಿಕ ಮೇ 23ರಂದು ಶಾಲೆ ಬಳಿಗೆ ಹೋಗಿದ್ದಾಗಲೂ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮತ್ತೆ 24ರಂದು ಶಾಲೆ ಕಡೆ ಹೋದಾಗ ಗೇಟ್ ಬಳಿ‌ ಬಂದ ಕೊಟ್ಟೂರು ಸ್ವಾಮೀಜಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ನಿಮ್ಮ ಕುಟುಂಬವನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಕಮಾಲಾಕ್ಷಿ ವಿವರಿಸಿದ್ದಾರೆ.

ಇದನ್ನೂ ಓದಿ | ಕಾಗೋಡು ತಿಮ್ಮಪ್ಪ ಪುತ್ರಿಗೆ ಬೆದರಿಕೆ, ಕಾರು ಚಾಲಕನ ಮೇಲೆ ಹಲ್ಲೆಗೆ ಯತ್ನ

Exit mobile version