Site icon Vistara News

Koppala News: ಅಂಜನಾದ್ರಿಗೆ ಸಂಸದ ಅನಂತಕುಮಾರ ಹೆಗಡೆ ಭೇಟಿ; ವಿಶೇಷ ಪೂಜೆ ಸಲ್ಲಿಕೆ

MP Ananthakumar Hegde visits Anjanadri

ಗಂಗಾವತಿ: ತಾಲೂಕಿನ ಚಿಕ್ಕರಾಂಪುರದಲ್ಲಿರುವ ಪ್ರಸಿದ್ಧ ಅಂಜನಾದ್ರಿ (Anjanadri) ಬೆಟ್ಟಕ್ಕೆ ಶುಕ್ರವಾರ ಉತ್ತರ ಕನ್ನಡದ ಸಂಸದ ಅನಂತಕುಮಾರ ಹೆಗಡೆ (MP Ananth kumar Hegde), ಕುಟುಂಬ ಸಮೇತ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿ, ಆಂಜನೇಯ ದೇವರ ದರ್ಶನ ಪಡೆದರು.

ಆನೆಗೊಂದಿ ಬಳಿ ಇರುವ ನವವೃಂದಾವನ ಗಡ್ಡೆಗೆ ಭೇಟಿ ನೀಡಿದ ಸಂಸದ ಅನಂತಕುಮಾರ ಹೆಗಡೆ, ಬಳಿಕ ಪಂಪಾಸರೋವರದಲ್ಲಿರುವ ಜಯಲಕ್ಷ್ಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದ ಬಿಜೆಪಿ ಮುಖಂಡರ ತಂಡ, ಅನಂತಕುಮಾರ ಹೆಗಡೆ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.

Exit mobile version