Site icon Vistara News

Koppala News: ಯತ್ನಾಳ್‌ರನ್ನು ಬಿಜೆಪಿಯಿಂದ ಉಚ್ಚಾಟಿಸಿದ್ರೆ ಪರಿಣಾಮ ಎದುರಿಸಬೇಕಾದೀತು! ಸ್ವಾಮೀಜಿ ಎಚ್ಚರಿಕೆ

Kudala sangama Panchamasali Peetha Jayamruthyunjaya Swamiji pressmeet in gangavathi

ಗಂಗಾವತಿ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ (MLA Basavanagowda Patil Yatnal) ಅವರು 2008 ರಿಂದ ಇಲ್ಲಿವರೆಗೂ ಬಿಜೆಪಿ ಪಕ್ಷದಲ್ಲಿ (BJP Party) ತಮಗಾದ ಅನ್ಯಾಯದ ವಿರುದ್ಧ ಸಹಜವಾಗಿ ಅಸಮಧಾನವನ್ನು ನೋವಿನ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಇದು ಯಾವುದೇ ಮನುಷ್ಯನ ಸಹಜಗುಣ. ಆದರೆ ಇದನ್ನೆ ಮುಂದಿಟ್ಟುಕೊಂಡು ಪಕ್ಷ ಏನಾದರೂ ಯತ್ನಾಳ್‌ರನ್ನು ಉಚ್ಛಾಟಿಸುವ ಕೆಲಸಕ್ಕೆ ಕೈ ಹಾಕಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್‌ ಭ್ರಷ್ಟಾಚಾರಿಯಲ್ಲ. ಪಕ್ಷ ವಿರೋಧಿ ಚಟುವಟಿಕೆ ಎಂದೂ ಮಾಡಿಲ್ಲ. ನೇರ ಮತ್ತು ನಿಷ್ಠುರವಾದಿ. ತತ್ವ ಸಿದ್ಧಾಂತಗಳ ಆಧಾರದಲ್ಲಿ ರಾಜಕೀಯ ಮಾಡುವ ವ್ಯಕ್ತಿ. ಹೀಗಾಗಿ ಪಕ್ಷದಲ್ಲಿ ತಮಗಾದ ಅನ್ಯಾಯವನ್ನು ಈ ರೀತಿ ವ್ಯಕ್ತಪಡಿಸುತ್ತಿದ್ದಾರೆ.

ಇದೇ ವಿಚಾರಕ್ಕೆ ಬಿಜೆಪಿ ಯತ್ನಾಳ್‌ರನ್ನು ಉಚ್ಛಾಟಿಸುವ ಯತ್ನಕ್ಕೆ ಕೈ ಹಾಕುವುದಿಲ್ಲ ಎಂಬ ವಿಶ್ವಾಸವಿದೆ. ಒಂದೊಮ್ಮೆ ಯತ್ನಾಳರನ್ನು ಉಚ್ಛಾಟಿಸಿದ್ದೇ ಆದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜದ 60 ಲಕ್ಷ ಜನ ಏನು ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುವುದು ಪಕ್ಷದ ವರಿಷ್ಠರಿಗೆ ಗೊತ್ತಿದೆ.

ಇದನ್ನೂ ಓದಿ: Ballari News: ಇಂದು ಸಂಜೆ ಗಾನ ಮಂಜುಳ ಕಾರ್ಯಕ್ರಮ; ವಿಸ್ತಾರ ನ್ಯೂಸ್‌ ಸಹಯೋಗ

ಹೀಗಾಗಿ ಪಕ್ಷದ ಹೈಕಮಾಂಡ್ ಯತ್ನಾಳ್‌ ಅವರ ನೋವು ಏನೆಂದು ಪತ್ತೆ ಹಚ್ಚಿ ಕರೆದು ಮಾತನಾಡಿಸುವ ಕೆಲಸ ಮಾಡಬೇಕು ಎಂದು ಮಾತ್ರ ನಾನು ಸಲಹೆ ನೀಡಬಲ್ಲ. ಯತ್ನಾಳ ಸೇರಿದಂತೆ ನಮ್ಮ ಸಮುದಾಯ ಯಾವುದೇ ಪಕ್ಷದಲ್ಲಿರುವ ಶಾಸಕರು ಅಥವಾ ನಾಯಕರಿಗೆ ಅನ್ಯಾಯವಾದರೆ ಅದರ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡುತ್ತೇವೆ.

ನಮ್ಮ ಸಮುದಾಯಕ್ಕೆ ಮೀಸಲಾತಿ ದೊರಕಿಸಿಕೊಡಬೇಕು ಎಂಬ ಹೋರಾಟಕ್ಕೆ ಬೆಂಬಲ ನೀಡುವ ಯಾವುದೇ ಸಮುದಾಯದ ನಾಯಕರಿದ್ದರೂ ಅವರನ್ನು ರಾಜಕೀಯವಾಗಿ ಬೆಂಬಲಿಸುತ್ತೇವೆ ಎಂದರು.

ಯತ್ನಾಳ್‌ ಅವರನ್ನು ಪಕ್ಷದಿಂದ ಉಚ್ಛಾಟಿಸಲು ಸಾಧ್ಯವಿಲ್ಲ. ಅವರ ಶಕ್ತಿ, ಸಾಮರ್ಥ್ಯ ಏನೆಂಬುವುದು ಪಕ್ಷದ ಹೈಕಮಾಂಡ್‌ಗೆ ಗೊತ್ತಿದೆ. ಅವರ ನಿಷ್ಠುರ ಮಾತುಗಳಿಗೆ ಕಾರಣ ಏನು ಎಂತಲೂ ಪಕ್ಷದ ಮುಖಂಡರಿಗೆ ಗೊತ್ತಿದೆ ಎಂದು ಸ್ವಾಮೀಜಿ ಹೇಳಿದರು.

ಜ.20 ಸರ್ಕಾರಕ್ಕೆ ಗಡುವು

ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬ ನಮ್ಮ ಹೋರಾಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಳಗಾವಿ ಅಧಿವೇಶನದ ಬಳಿಕ ಕೇವಲ ಒಂದು ವಾರದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದು, ಹೋರಾಟ ಕೈ ಬಿಡುವಂತೆ ಮನವಿ ಮಾಡಿದ್ದರು.

ಹೀಗಾಗಿ ಭರವಸೆ ಹಿನ್ನಲೆ ತಾತ್ಕಾಲಿಕ ಹೋರಾಟವನ್ನು ಕೈಬಿಡಲಾಗಿತ್ತು. ಆದರೆ ಬೆಳಗಾವಿ ಅಧಿವೇಶನದ ಮುಗಿದು ಎರಡು ವಾರ ಕಳೆದಿದೆ. ಆದರೆ ಇದುವರೆಗೂ ಸರ್ಕಾರದಿಂದ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಹೊಸ ಸರ್ಕಾರ ಬಂದ ಬಳಿಕ ಆಡಳಿತಾತ್ಮಕ ವಿಚಾರಕ್ಕೆ ಸಮಯದ ಅವಕಾಶ ನೀಡಲಾಗಿತ್ತು.

ಇದನ್ನೂ ಓದಿ: Theft Case : ದೇವರ ಪೂಜೆ ದಿನ ಉಂಡು ಹೋದವರು 21 ಕೆಜಿ ಚಿನ್ನ, ಬೆಳ್ಳಿ ಕೊಂಡೂ ಹೋದರು!

ಈಗ ಜನವರಿ 20ರವರೆಗೂ ಕಾಲಾವಕಾಶ ನೀಡಲಾಗುವುದು. ಆ ಬಳಿಕ ಬೆಂಗಳೂರಿನಲ್ಲಿ ಹತ್ತು ಲಕ್ಷ ಜನರನ್ನು ಸೇರಿಸಿ ವಿಧಾನಸೌಧ ಮುತ್ತಿಗೆ ಹಾಕುವ ಕೆಲಸ ಮಾಡುತ್ತೇವೆ. ನಮ್ಮ ಉದ್ದೇಶ ಒಂದೇ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ.

Exit mobile version