Site icon Vistara News

ʼಕುಮಾರಣ್ಣʼ ಪರ ಮದುವೆ ಮಂಟಪದಲ್ಲಿ ಚುನಾವಣೆ ಪ್ರಚಾರ

ಮದುವೆ ಮಂಟಪದಲ್ಲಿ ಚುನಾವಣೆ ಪ್ರಚಾರ

ಕೊಪ್ಪಳ: 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರಿಗೆ ಚುನಾವಣೆಯಲ್ಲಿ ಬೆಂಬಲ ನೀಡಿ ಎಂದು ಮದುವೆ ಮಂಟಪದಲ್ಲೆ ಪ್ರಚಾರ ಮಾಡಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಡೇಕೊಪ್ಪದಲ್ಲಿ ಮದುವೆ ಮಂಟಪದಲ್ಲಿ ಚುನಾವಣೆ ಪ್ರಚಾರ ಮಾಡಲಾಗಿದೆ. 2023 ಕ್ಕೆ ಕುಮಾರಣ್ಣನನ್ನು ಬೆಂಬಲಿಸಿ ಎಂದು ನೂತನ ದಂಪತಿ ಬ್ಯಾನರ್ ಹಿಡಿದಿದ್ದಾರೆ.

ಈ ಬಾರಿ ನಾವು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆಂದು ಹೇಳಿರುವ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಿದ್ಧತೆ ನಡೆಸುತ್ತಿದೆ. ನೂರಕ್ಕೆ ನೂರರಷ್ಟು ಈ ಬಾರಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್‌ ಸಹ ಹೇಳುತ್ತಿದೆ. ಇದೇ ವೇಳೆ ಜನತಾ ಜಲಧಾರೆ ಮೂಲಕ ಮಿಷನ್ 123 ಯುದ್ಧವನ್ನು ಜೆಡಿಎಸ್‌ ಆರಂಭಿಸಿದೆ.

ಇದನ್ನೂ ಓದಿ| ಪುನೀತ್ ರಾಜಕುಮಾರ್‌ ಪೋಟೋ ಸಮ್ಮುಖದಲ್ಲಿ ಮದುವೆಯಾದ ಜೋಡಿ

ಜಗದೀಶ ನಿಡಗುಂದಿಮಠ ಹಾಗೂ ಪೂಜಾ ಎಂಬ ನೂತನ ದಂಪತಿ ‘ರಾಜ್ಯದ ಸಮಗ್ರ ನೀರಾವರಿಗಾಗಿ 2023ರ ಚುನಾವಣೆಯಲ್ಲಿ ಕುಮಾರಣ್ಣನಿಗೆ ಬೆಂಬಲಿಸಿ’ ಎಂದು ಮದುವೆ ಮಂಟಪದಲ್ಲಿ ಚುನಾವಣೆ ಪ್ರಚಾರ ಮಾಡಿದ್ದಾರೆ. ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ| ಕಲ್ಯಾಣ ಮಂಟಪದಿಂದ ನೇರವಾಗಿ ಪರೀಕ್ಷಾ ಕೊಠಡಿಯಲ್ಲಿ ಹಾಜರಾದ ವಧು

Exit mobile version