Site icon Vistara News

ಅಂಜನಾದ್ರಿಗೆ ಆಗಮಿಸಲು ಯೋಗಿ ಆದಿತ್ಯನಾಥರಿಗೆ ಆಹ್ವಾನ

Anjanadri hill

ಕೊಪ್ಪಳ: ರಾಮಭಕ್ತ ಜನಿಸಿದ ಸ್ಥಳ ಇರುವುದು ಕರ್ನಾಟಕದಲ್ಲಿ, ಕೊಪ್ಪ ಳದ ಅಂಜನಾದ್ರಿ ಪರ್ವತದಲ್ಲಿ.
ಗಂಗಾವತಿ ತಾಲೂಕಿನಲ್ಲಿರುವ ಈ ಪ್ರಸಿದ್ಧ ಕ್ಷೇತ್ರದಲ್ಲಿ ಆಗಸ್ಟ್‌ನಲ್ಲಿ ಸಂತ ಸಮ್ಮೇಳನ ಆಯೋಜಿಸಲಾಗುತ್ತಿದೆ.
ಅಂಜನಾದ್ರಿ ಪರ್ವತ ದೇವಸ್ಥಾನದ ಅರ್ಚಕ ವಿದ್ಯಾದಾಸ ಬಾಬಾ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮಕ್ಕೆ ರಾಜ್ಯದ ಅನೇಕ ಗಣ್ಯರನ್ನು ಆಹ್ವಾನಿಸಲಾಗುತ್ತದೆ. ಈ ನಡುವೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನೇತೃತ್ವ ವಹಿಸಿರುವ ಉತ್ತರ ಪ್ರದೇಶ ಮುಖ್ಯ ಮಂತ್ರಿಯೋಗಿ ಆದಿತ್ಯನಾಥ ಅವರು ಆಗಮಿಸ ಬೇಕೆಂಬುದು ಆಯೋಜಕರ ನಿರೀಕ್ಷೆ. ಇತ್ತೀಚೆಗೆ ಉತ್ತರ ಪ್ರದೇಶಕ್ಕೆ ತೆರಳಿದ ವಿದ್ಯಾದಾಸ ಬಾಬಾ ಅವರು , ಅಂಜನಾದ್ರಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವಂತೆ ಯೋಗಿ ಆದಿತ್ಯನಾಥ ಅವರಿಗೆ ಆಹ್ವಾನ ನೀಡಿದ್ದಾರೆ. ಕಾರ್ಯ ಕ್ರಮಕ್ಕೆ ಆಗಮಿಸುವ ಕುರಿತು ಶೀಘ್ರದಲ್ಲೆ ಖಚಿತಪಡಿಸುವುದಾಗಿ ಆದಿತ್ಯನಾಥ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಇಂದಿನಿಂದ ಉತ್ತರ ಪ್ರದೇಶದಲ್ಲಿ ʻಯೋಗಿʼ ದರ್ಬಾರ್: ಸಂಜೆ 4 ಗಂಟೆಗೆ ಪಟ್ಟಾಭಿಷೇಕ

Exit mobile version