Site icon Vistara News

lalbagh flower show 2023 : ಲಾಲ್‌ಬಾಗ್‌ ಕಾರ್ಮಿಕನಿಗೆ ತಪ್ಪಾಯ್ತಣ್ಣಾ ಎಂದ ರಚಿತಾ ರಾಮ್‌

Rachitha ram Apologized lalbagh worker rangapa

ಬೆಂಗಳೂರು: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ (lalbagh flower show 2023) ನಟಿ ರಚಿತಾ ರಾಮ್‌ ಅವರು ಸೋಮವಾರ (ಆಗಸ್ಟ್‌ 14) ಭೇಟಿ ನೀಡಿದ್ದರು. ಅಲ್ಲಿಂದ ವಾಪಸ್‌ ತೆರಳುವಾಗ ನಟಿ ಇದ್ದ ಕಾರು ಕಾರ್ಮಿಕರೊಬ್ಬರಿಗೆ ಡಿಕ್ಕಿ ಹೊಡೆದಿತ್ತು. ಘಟನೆ ನಡೆದ ಬಳಿಕ ನಟಿ ರಚಿತಾ ರಾಮ್‌ (Actress Rachita Ram) ಸೌಜನ್ಯಕ್ಕೂ ಕ್ಷಮೆ ಕೇಳದೆ ಹೋಗಿದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು. ಆದರೆ ಮಂಗಳವಾರ ಕಾರ್ಮಿಕ ರಂಗಪ್ಪವರನ್ನು ಮನೆಗೆ ಕರೆಸಿಕೊಂಡು ನಟಿ ರಚಿತಾ ರಾಮ್‌ ಕ್ಷಮೆ ಕೇಳಿದ್ದಾರೆ.

ಕಾರ್ಮಿಕ ರಂಗಪ್ಪರಿಗೆ ಕ್ಷಮೆ ಕೇಳಿದ ರಚಿತಾ ರಾಮ್‌

ಇದೊಂದು ಆಕಸ್ಮಿಕವಾಗಿ ನಡೆದಿರುವ ಘಟನೆ ಆಗಿದೆ. ನನ್ನ ಹಾಗೂ ನನ್ನ ಡ್ರೈವರ್‌ ಕಡೆಯಿಂದ ತಪ್ಪಾಗಿದೆ. ಇದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ನಟಿ ರಚಿತಾ ರಾಮ್‌ ತಿಳಿಸಿದ್ದಾರೆ. ಈ ಘಟನೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ. ಜತೆಗೆ ಈ ಘಟನೆ ಆದಾಗ ನಿಜಕ್ಕೂ ನನ್ನ ಗಮನಕ್ಕೆ ಬರಲಿಲ್ಲ, ಬಂದಿದ್ದರೆ ಆಗಲೇ ಕ್ಷಮೆ ಕೇಳುತ್ತಿದ್ದೆ. ಆದರೆ ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾದ ಕೂಡಲೇ ಲಾಲ್‌ಬಾಗ್‌ ಕಾರ್ಮಿಕ ರಂಗಪ್ಪ ಅವರನ್ನು ಮನೆಗೆ ಕರೆಸಿಕೊಂಡು ಕ್ಷಮೆ ಕೇಳಿದ್ದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Bengaluru Metro : ಬೈಯಪ್ಪನಹಳ್ಳಿ-ಕೆಆರ್‌ಪುರ ಮೆಟ್ರೋ ಓಡಾಟಕ್ಕೆ ಸೆಪ್ಟೆಂಬರ್‌ನಲ್ಲಿ ಚಾಲನೆ

ಹೂಗಳ ಲೋಕದಲ್ಲಿ ಡಿಂಪಲ್‌ ಕ್ವೀನ್‌

ಏನಿದು ಘಟನೆ

ನಟಿ ರಚಿತಾ ರಾಮ್‌ ಇದ್ದ ಕಾರು ಒಂದು ಬದಿಯಲ್ಲಿ ಬರುತ್ತಿತ್ತು. ಇತ್ತ ಎತ್ತಲ್ಲೋ ನೋಡುತ್ತಾ ಹೆಜ್ಜೆ ಹಾಕಿ ಬಂದಿದ್ದ ರಂಗಪ್ಪ ಕಾರಿನ ಬಳಿ ಹೋಗಿದ್ದರು. ಇತ್ತ ಕಾರು ಅತ್ತ ಕಾರ್ಮಿಕ ಒಟ್ಟಿಗೆ ಬಂದಿದ್ದರಿಂದ ಕಾರು ರಂಗಪ್ಪ ಅವರಿಗೆ ಟಚ್‌ ಆಗಿತ್ತು.

ಅಪಘಾತ ವಿಡಿಯೋ ಇಲ್ಲಿದೆ ನೋಡಿ

ಇಲ್ಲಿ ಚಾಲಕನ ನಿರ್ಲಕ್ಷ್ಯವೋ ಅಥವಾ ಕಾರ್ಮಿಕನ ನಿರ್ಲಕ್ಷ್ಯವೋ ಗೊತ್ತಿಲ್ಲ. ಆದರೆ, ಕಾರಿನಡಿ ಸಿಲುಕಿದ್ದರೆ ಕಾರ್ಮಿಕನ ಜೀವಕ್ಕೆ ಕಂಟಕವಾಗುತ್ತಿತ್ತು. ಆದರೆ, ಅದೃಷ್ಟವಶಾತ್‌ ಅನಾಹುತ ತಪ್ಪಿತ್ತು. ಅಪಘಾತದ ದೃಶ್ಯ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಕಾರು ಗುದ್ದಿದ್ದಕ್ಕೆ ಕಾರ್ಮಿಕನಿಗೆ ನಟಿ ಕ್ಷಮೆಯಾಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು. ಇದೀಗ ಸ್ವತಃ ಮನೆಗೆ ಕರೆಸಿಕೊಂಡ ನಟಿ ರಚಿತಾ ರಾಮ್‌ ಕ್ಷಮೆ ಕೇಳಿ ಸ್ವಾತಂತ್ರ್ಯೋತ್ಸವ ಶುಭಾಶಯವನ್ನು ತಿಳಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version