Site icon Vistara News

Leopard Attack: ನಾಯಿ ಎಳೆದೊಯ್ದು ತಿಂದು ಹಾಕಿರುವ ಚಿರತೆ; ಬೆಂಗಳೂರಿನಲ್ಲಿ ಮತ್ತೆ ಆತಂಕ

ಚಿರತೆ

#image_title

ಬೆಂಗಳೂರು: ಇಲ್ಲಿನ ನೈಸ್ ರಸ್ತೆಯ ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಗೊಂಗಡಿಪುರದಲ್ಲಿ ಚಿರತೆಯೊಂದು (Leopard Attack) ಪ್ರತ್ಯಕ್ಷವಾಗಿದ್ದು, ಆತಂಕವನ್ನು ಹುಟ್ಟುಹಾಕಿದೆ. ಈ ಭಾಗದಲ್ಲಿ ಚಿರತೆ ಬಂದಿರುವ ಸುದ್ದಿ ಕೇಳಿ ಗೊಂಗಡಿಪುರ ಗ್ರಾಮಸ್ಥರು ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ.

ಕಳೆದ ೨ ತಿಂಗಳಿನಿಂದ ಚಿರತೆಗಳು ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿವೆ. ಹಿಂದೊಮ್ಮೆ ಚಿರತೆ ಹಾಗೂ ಎರಡು ಮರಿ ಚಿರತೆಗಳು ಪ್ರತ್ಯಕ್ಷವಾಗಿದ್ದವು. ಕಳೆದ 15 ದಿನದ ಹಿಂದೆ ಗ್ರಾಮದಲ್ಲಿ ಓಡಾಡುತ್ತಿದ್ದ ಚಿರತೆಯು ಬುಧವಾರ ರಾತ್ರಿ ನಾಯಿಯೊಂದನ್ನು ತಿಂದು ಹಾಕಿದೆ.

ಹೀಗಾಗಿ ಚಿರತೆ ಬಗ್ಗೆ ಭಯಭೀತರಾಗಿರುವ ಗ್ರಾಮದ ನಿವಾಸಿಗಳು, ರಾತ್ರಿ ೮ ಗಂಟೆ ನಂತರ ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಅರಣ್ಯಾಧಿಕಾರಿಗಳು ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿಯುವಂತೆ ಮನವಿ ಮಾಡಿದ್ದಾರೆ. ಈಗ ೨ ತಿಂಗಳ ಹಿಂದೆ ಚಿರತೆ ಕಾಣಿಸಿಕೊಂಡು ಆತಂಕವನ್ನು ಹುಟ್ಟುಹಾಕಿತ್ತು. ಚಿರತೆ ಸೆರೆಗೆ ಕಾರ್ಯಾಚರಣೆಯನ್ನೂ ನಡೆಸಲಾಗಿತ್ತು. ಆದರೆ, ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ: Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಉದ್ಯೋಗಿಗಳು ಬೇಕಿದ್ದಾರೆ; ಆದರೆ, ಅರ್ಜಿ ಹಾಕಬೇಡಿ!

Exit mobile version