Site icon Vistara News

liquor bar protest | ರಾತ್ರಿ ಮದ್ಯ ಸೇವಿಸಿದವನು ಬೆಳಗ್ಗೆ ಸಾವು; ಬಾರ್‌ ಮುಂದೆ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ

liquor bar protest

ಚಿಕ್ಕಮಗಳೂರು: ಇಲ್ಲಿನ ತರೀಕೆರೆ ತಾಲೂಕಿನ ಕರಕುಚ್ಚಿ ಕಾಲೋನಿಯಲ್ಲಿ ರಾತ್ರಿ ಮದ್ಯ (liquor bar protest) ಸೇವಿಸಿದವನು ಬೆಳಾಗುವಷ್ಟರಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಬಾರ್‌ನಲ್ಲಿ ಕುಡಿದು ಬಂದಿದ್ದಕ್ಕೆ ಮೃತಪಟ್ಟಿದ್ದಾನೆ ಎಂದು ಆರೋಪಿಸಿ, ಸಪ್ತಗಿರಿ ಬಾರ್ ಮುಂದೆ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಮಂಜುನಾಥ್ (29) ಮೃತ ವ್ಯಕ್ತಿ.

ಮಂಗಳವಾರ ರಾತ್ರಿ ಮದ್ಯ ಸೇವಿಸಿದ್ದ ಮಂಜುನಾಥ್ ಬೆಳಗ್ಗೆ ಮೇಲೆ ಏಳಲಿಲ್ಲ. ಈ ಬಾರ್‌ನಲ್ಲಿ ಕುಡಿದಿದ್ದರಿಂದಲೇ ಮಂಜುನಾಥ್ ಮೃತಪಟ್ಟಿದ್ದು, ಈ ಹಿಂದೆಯೂ ಇದೇ ರೀತಿ ಮೂರ್ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಕೂಡಲೇ ಬಾರ್ ಮುಚ್ಚುವಂತೆ ಸ್ಥಳೀಯರು ಮಾಲೀಕನ ಮೇಲೆ ಒತ್ತಡ ಹಾಕಿ ಆಕ್ರೋಶ ಹೊರಹಾಕಿದ್ದಾರೆ.

ಕೂಗಳತೆ ದೂರದಲ್ಲಿ ಶಾಲೆಯಲ್ಲಿ ಇದ್ದರೂ ಬಾರ್‌ ತೆರೆಯಲು ಅನುಮತಿ ನೀಡಿದ್ದಕ್ಕೆ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಕಿಡಿಕಾರಿದರು. ಬಾರ್‌ನಲ್ಲಿ ಕುಡಿದು ಶಾಲೆಗಳತ್ತ ಹೋಗಿ ಗಲಾಟೆ ಮಾಡುತ್ತಾರೆ. ಕೂಡಲೇ ಈ ಬಾರ್‌ ಮುಚ್ಚಿಸಬೇಕೆಂದು ಸ್ಥಳೀಯರು ಆಗ್ರಹಿಸಿದರು.

ಇದನ್ನೂ ಓದಿ | Aadhaar Address Change | ಆನ್‌ಲೈನ್‌ನಲ್ಲಿ ಸುಲಭವಾಗಿ ಆಧಾರ್‌ ಅಡ್ರೆಸ್‌ ಚೇಂಜ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

Exit mobile version