Site icon Vistara News

3ದಿನದ ಹಸುಗೂಸಿಗೆ ತುರ್ತು ಸರ್ಜರಿ; ಶಿವಮೊಗ್ಗದಿಂದ ಜೀರೋ ಟ್ರಾಫಿಕ್​​ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್​

ambulance

ಶಿವಮೊಗ್ಗ: ಹೃದಯ ಸಮಸ್ಯೆಯಿಂದ (Heart Problem) ಬಳಲುತ್ತಿದ್ದ ಮೂರು ದಿನದ ಹಸುಗೂಸನ್ನು ಆಂಬ್ಯುಲೆನ್ಸ್​ ಮೂಲಕ ಶಿವಮೊಗ್ಗದಿಂದ ಬೆಂಗಳೂರಿನ ನಾರಾಯಣ ಹೃದಯಾಲಯ (Narayana Hrudayalaya)ಕ್ಕೆ ಕರೆದುಕೊಂಡು ಬರಲಾಗಿದೆ. ಭಾನುವಾರ ರಾತ್ರಿ 10.10ಕ್ಕೆ ಶಿವಮೊಗ್ಗದಿಂದ ಹೊರಟ ಆಂಬ್ಯುಲೆನ್ಸ್​ ರಾತ್ರಿ 1.30ರ ಹೊತ್ತಿಗೆ ಇಲ್ಲಿನ ಎಲೆಕ್ಟ್ರಾನಿಕ್​ ಸಿಟಿಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ತಲುಪಿದೆ. ಮಗು ಸುರಕ್ಷಿತವಾಗಿ ಬಂದಿದೆ. ಈ ಮಗುವಿಗೆ ವೈದ್ಯರು ತುರ್ತಾಗಿ ಓಪನ್​ ಹಾರ್ಟ್​ ಸರ್ಜರಿ (ತೆರೆದ ಹೃದಯ ಶಸ್ತ್ರಚಿಕಿತ್ಸೆ) ನಡೆಸಲಿದ್ದಾರೆ (open heart surgery newborn).

ಮಗು ಹುಟ್ಟಿ ಮೂರುದಿನಗಳಷ್ಟೇ ಆಗಿದೆ. ಆದರೆ ಅದಕ್ಕೆ ಹೃದಯ ಸಮಸ್ಯೆ ಇರುವುದು ಗೊತ್ತಾಗಿದೆ. ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ನಾರಾಯಣ ಹೃದಯಾಲಯಕ್ಕೆ ಕರೆತರಲಾಗಿದೆ. ಆಂಬ್ಯುಲೆನ್ಸ್​ ಚಾಲಕ ಜಗದೀಶ್​ ಮೂರೂವರೆ ತಾಸಿಗೆ ಮಗುವನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದು, ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಇನ್ನು ಆಂಬ್ಯುಲೆನ್ಸ್​​ನಲ್ಲಿ ಮಗುವಿನೊಂದಿಗೆ ಸ್ಟಾಫ್ ನರ್ಸ್​ಗಳಾದ ವಿನಯ್ ಮತ್ತು ಹನುಮಂತ ಎಂಬುವರು ಇದ್ದರು. ಇದರಲ್ಲಿ ಹನುಮಂತ ಮಗುವನ್ನು ಶಿವಮೊಗ್ಗದಿಂದ ಇಲ್ಲಿಯವರೆಗೂ ಮಡಿಲಲ್ಲಿ ಎತ್ತಿಕೊಂಡೇ ಕುಳಿತಿದ್ದರು.

ಇದನ್ನೂ ಓದಿ: Corruption Case: ಸರ್ಕಾರಿ ಆಂಬ್ಯುಲೆನ್ಸ್‌ ಕಳುಹಿಸಲು ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯ!

Exit mobile version