Site icon Vistara News

ಸರಗಳ್ಳರಿಗಾಗಿ ಕತ್ತಲಲ್ಲೆ ನದಿಯಲ್ಲಿ ಪೊಲೀಸರ ಹುಡುಕಾಟ!

tunga bridge

ಶಿವಮೊಗ್ಗದ ತುಂಗಾ ನದಿ ಸೇತುವೆ ಬಳಿ ಸರಗಳ್ಳರಿಗಾಗಿ ಪೊಲೀಸರು ನಡೆಸುತ್ತಿದ್ದ ಕಾರ್ಯಾಚರಣೇಯನ್ನು ಸ್ಥಳೀಯರು ಕುತೂಹಲದಿಂದ ವೀಕ್ಷಿಸಿದರು.

ಶಿವಮೊಗ್ಗ: ತುಂಗಾ ನದಿಯಲ್ಲಿ ಪೊಲೀಸರು ಸೋಮವಾರ ರಾತ್ರಿ ದಿಢೀರ್ ಶೋಧ ಕಾರ್ಯಾಚರಣೆ ನಡೆಸಿದರು. ಇದನ್ನು ನೋಡುವ ಕುತೂಹಲದಿಂದ ಸೇತುವೆ ಮೇಲೆ ನೂರಾರು ಜನ ಸೇರಿದ್ದರು.

ಸೇತುವೆ ಮಾರ್ಗದಲ್ಲಿ ಸರಗಳ್ಳತನ ಮಾಡಿ ಇಬ್ಬರು ಬೈಕ್‌ನಲ್ಲಿ ಬರುತ್ತಿದ್ದುದನ್ನು ಗಮನಿಸಿದ ಜನರು ಕಳ್ಳ ಕಳ್ಳ ಎಂದು ಕಿರುಚಿದ್ದರು. ಈ ವೇಳೆ ಅಲ್ಲಿದ್ದ ಕೆಲವರು ಕಳ್ಳರನ್ನು ಬೆನ್ನಟ್ಟಿದರು. ಹೊಳೆ ಬಸ್​​ಸ್ಟಾಪ್ ಮೂಲಕ ಸೇತುವೆ ದಾಟಲು ಬಂದ ಸರಗಳ್ಳರು ಜನರನ್ನು ನೋಡಿ ಹೆದರಿ ಗುಂಡಪ್ಪಶೆಡ್​ ಕಡೆಗೆ ಬೈಕ್ ತಿರುಗಿಸಿದರು. ಈ ವೇಳೆ ಅಡ್ಡಗಟ್ಟಿದ ಜನರು ಬೈಕ್ ಬೀಳಿಸಿ ಆರೋಪಿಗಳನ್ನ ಹಿಡಿಯಲು ಯತ್ನಿಸಿದರು. ಈ ವೇಳೆ ಆರೋಪಿಗಳಲ್ಲಿ ಒಬ್ಬ ರೈಲ್ವೆ ಬ್ರಿಡ್ಜ್​ ಮೇಲೆ ಓಡಿದ್ದು, ಮತ್ತೊಬ್ಬ ಬೆಕ್ಕಿನ ಕಲ್ಮಠದ ಬಳಿ ಹೊಳೆಗೆ ಇಳಿದಿದ್ದಾನೆ.

ರೈಲ್ವೆ ಬ್ರಿಡ್ಜ್​ ಮೇಲೆ ಹೋದ ಆರೋಪಿಯನ್ನು ಇನ್ನೊಂದು ಕಡೆಯಿಂದ ಸುತ್ತುವರಿದ ಜನರು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ. ಹೊಳೆಗೆ ಇಳಿದವನ ಬಗ್ಗೆ ಸುಳಿವು ಸಿಗದೇ ಪೊಲೀಸರು ಹುಡುಕಾಡಲು ಆರಂಭಿಸಿದರು. ಕತ್ತಲಲ್ಲಿ ನಿರಂತರವಾಗಿ ಬ್ಯಾಟರಿ ಬಿಟ್ಟು ಹುಡುಕಿದರೂ ಆರೋಪಿ ಸಿಗದ ಕಾರಣ ಪೊಲೀಸರು ವಾಪಸಾದರು.

ಇದನ್ನೂ ಓದಿ | Cyber Crime | ಲಕ್ಷ ಹಣ ಕಳೆದುಕೊಂಡ ಬಿಎಸ್‌ಎಫ್‌ ಯೋಧ

Exit mobile version