Site icon Vistara News

Poster Abhiyana: ಬನವಾಸಿಯಲ್ಲಿ ಬಿಜೆಪಿ ವಿರುದ್ಧ ಪೋಸ್ಟರ್ ಅಭಿಯಾನ;

Poster Abhiyana Banavasi

#image_title

ಶಿರಸಿ: ಪೇ ಸಿಎಂ ಪೋಸ್ಟರ್ ಈಗ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ಬೀದಿ ಬೀದಿಗಳಲ್ಲಿ ಸದ್ದು ಮಾಡಿದ್ದು, ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ತನ್ನ ಪೋಸ್ಟರ್ ಪ್ರತಿಭಟನೆಯನ್ನು‌ (Poster Abhiyana) ಮುಂದುವರಿಸಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ವಿರುದ್ಧ ಪೋಸ್ಟರ್ ವಾರ್ ನಡೆಸಿದೆ. ಶಿರಸಿ ತಾಲೂಕಿನ ಬನವಾಸಿ ಕದಂಬೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರ ಪೋಸ್ಟರ್ ಅನ್ನು ಹಾಕಿ ಪ್ರತಿಭಟನೆ ವ್ಯಕ್ತಪಡಿಸಲಾಗಿದೆ. ಶಿರಸಿ-ಬನವಾಸಿ ಮಾರ್ಗದಲ್ಲಿ ಸಿಎಂ ಬರುವ ರಸ್ತೆಯ ಅಂಚಿನ ಮರ ಹಾಗೂ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಲಾಗಿತ್ತು.

ಸಚಿವ ಶಿವರಾಮ ಹೆಬ್ಬಾರ್‌ ವಿರುದ್ಧದ ಪೋಸ್ಟರ್

ಇದನ್ನೂ ಓದಿ: ಕಾಶ್ಮೀರಿ ಪಂಡಿತ ಸಂಜಯ್​ ಶರ್ಮಾನನ್ನು ಕೊಂದ ಉಗ್ರನ ಹತ್ಯೆ; ಪುಲ್ವಾಮಾದಲ್ಲಿ ಮುಂದುವರಿದ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ

ಪೋಸ್ಟರ್ ನಲ್ಲಿ ಆಹಾರದ “ಕಿಟ್ ಸ್ಕ್ಯಾಮ್ ಗೆ PAY CM ಮಾಡಿ” ಹಾಗೂ “ಡೀಲ್ ನಿ‌ಮ್ದು ಕಮಿಷನ್ ನಮ್ದು” ಎಂದು ಬರೆದು ಬನವಾಸಿಯ ರಸ್ತೆಗಳಲ್ಲಿ ಪೋಸ್ಟರ್ ಅಂಟಿಸಲಾಗಿದ್ದು, ಮತ್ತೆ ಬಿಜೆಪಿ ವಿರುದ್ಧ ಪೋಸ್ಟರ್ ಅಭಿಯಾನ ಮುಂದುವರಿದಿದೆ.

ಇದನ್ನೂ ಓದಿ: Karnataka Election: ಕಾಂಗ್ರೆಸ್‌ನಿಂದ ಸಮಾಜವನ್ನು ಕಾಪಾಡುವುದೇ ದೊಡ್ಡ ಕೆಲಸ ಆಗಿದೆ: ಡಾ. ಅಶ್ವತ್ಥನಾರಾಯಣ

Exit mobile version