Site icon Vistara News

Bellary News: ಬಳ್ಳಾರಿ ನೂತನ ಜಿಲ್ಲಾಧಿಕಾರಿಯಾಗಿ ಪ್ರಶಾಂತ್ ಕುಮಾರ್ ಮಿಶ್ರ ನೇಮಕ

Bellary DC Prashant Kumar Mishra

ಬಳ್ಳಾರಿ: ಬಳ್ಳಾರಿಯ ನೂತನ ಜಿಲ್ಲಾಧಿಕಾರಿಯಾಗಿ ಪ್ರಶಾಂತ್ ಕುಮಾರ್ ಮಿಶ್ರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಭಾನುವಾರ ಮಧ್ಯಾಹ್ನ ಬಳ್ಳಾರಿ (Bellary News)) ಜಿಲ್ಲಾಧಿಕಾರಿಯಾಗಿ ಮಿಶ್ರ ಅವರು ಅಧಿಕಾರ ಸ್ವೀಕರಿಸಿದರು.

ಪ್ರಶಾಂತ್ ಕುಮಾರ್ ಮಿಶ್ರ ಅವರು 2014ರ ಬ್ಯಾಚ್‌ನ‌ ಐಎಎಸ್ ಅಧಿಕಾರಿಯಾಗಿದ್ದು, ಈ ಹಿಂದೆ ಇವರು ಕೆಎಸ್ಆರ್‌ಟಿಸಿ ನಿರ್ದೇಶಕರಾಗಿದ್ದರು. ಇದಕ್ಕೂ ‌ಮೊದಲು ಪವನ್‌ಕುಮಾರ್ ಮಾಲಪಾಟಿ ಬಳ್ಳಾರಿಯ ಜಿಲ್ಲಾಧಿಕಾರಿಯಾಗಿದ್ದರು. ಅವರನ್ನು ಗ್ರಾಮೀಣ ಅಭಿವೃದ್ಧಿ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ | Rain News : ಮಳೆ ಅಬ್ಬರ; ನಾಳೆ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

ಕೆಲ ದಿನಗಳ ಹಿಂದೆ ಪವನ್ ಕುಮಾರ್ ಮಾಲಪಾಟಿ ಜಾಗಕ್ಕೆ ವಿಜಯನಗರ ಜಿಲ್ಲೆಯ ಮಾಜಿ ಡಿಸಿ ಟಿ.ವೆಂಕಟೇಶ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ವೆಂಕಟೇಶ್ ನೇಮಕದ ಬಗ್ಗೆ ಸಚಿವ ನಾಗೇಂದ್ರ ಒಲವು ತೋರಿದ್ದರೆ, ಜಿಲ್ಲೆಯ ಕೆಲ ಶಾಸಕರ ವಿರೋಧ ಇತ್ತು. ಈ ವಿಚಾರ ಸಿಎಂವರೆಗೂ ಹೋಗಿತ್ತು. ಕೊನೆಗೆ ಅಳೆದು ತೂಗಿ ವೆಂಕಟೇಶ್ ಬದಲಿಗೆ ಪ್ರಶಾಂತ್ ಕುಮಾರ್ ಮಿಶ್ರ ಅವರನ್ನು ಬಳ್ಳಾರಿ ಡಿಸಿಯಾಗಿ ಸರ್ಕಾರ ವರ್ಗಾವಣೆ ಮಾಡುವ ಮೂಲಕ ಜಿಲ್ಲಾಧಿಕಾರಿ ಆಯ್ಕೆ ಗೊಂದಲಕ್ಕೆ ತೆರೆ ಎಳೆದಿದೆ.

Exit mobile version