Site icon Vistara News

Accident Case |ಬೈಕ್‌-ಸರ್ಕಾರಿ ಬಸ್ ನಡುವೆ ಭೀಕರ ಅಪಘಾತ: ತಂದೆ-ಮಗ ದಾರುಣ ಸಾವು

Accident Case

ರಾಯಚೂರು : ಜಿಲ್ಲೆಯ ಲಿಂಗಸಗೂರು ತಾಲೂಕಿನ ವಂದಲಿ ಹೊಸೂರು ಬಳಿ ಬುಧವಾರ (ಸೆ.14) ಬೈಕ್ ಹಾಗೂ ಸರ್ಕಾರಿ ಬಸ್ ನಡುವೆ ಭೀಕರ ಅಪಘಾತ (Accident Case) ಸಂಭವಿಸಿದ್ದು ತಂದೆ-ಮಗ ಇಬ್ಬರೂ ದಾರುಣವಾಗಿ ಮೃತಪಟ್ಟಿದ್ದಾರೆ.

ತಂದೆ ರಮೇಶ (35) ಹಾಗೂ ಮಗ ಅಮರೇಶ (11) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಬೆಳಗ್ಗೆ ಹೊಲಕ್ಕೆ ಮೇವು ತರಲೆಂದು ತಂದೆ ಮತ್ತು ಮಗ ಹೋಗಿದ್ದರು. ಮೇವು ತೆಗೆದುಕೊಂಡು ವಾಪಸ್ ಬರುವಾಗ ಬೈಕ್ ಮತ್ತು ಸರಕಾರಿ ಬಸ್ ನಡುವೆ ಭೀಕರವಾಗಿ ಅಪಘಾತ ಸಂಭವಿಸಿದೆ.

ಇದನ್ನೂ ಓದಿ | Accident | ಕಾರ್ಕಳ ಸಮೀಪ ಖಾಸಗಿ ಬಸ್ ಡಿಕ್ಕಿ ಹೊಡೆದು ಪಿಕಪ್‌ ಚಾಲಕ ಸ್ಥಳದಲ್ಲೇ ಮೃತ್ಯು

ಹಟ್ಟಿಯಿಂದ ದೇವದುರ್ಗ ಕಡೆ ಬಸ್‌ ಹೊರಟಿತ್ತು. ಅಪಘಾತದ ಸ್ಥಳಕ್ಕೆ ಹಟ್ಟಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version