Site icon Vistara News

Death News: ಶಾಸಕ ಮಾನಪ್ಪ ವಜ್ಜಲ್ ಅವರ ಸಹೋದರ ನಿಧನ

Nagappa Vajjal passed away

ರಾಯಚೂರು: ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಅವರ ಸಹೋದರ ನಾಗಪ್ಪ ವಜ್ಜಲ್ (54) ಸೋಮವಾರ ನಿಧನರಾದರು. ಕಳೆದ ಹಲವು ದಿನಗಳಿಂದ‌ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ಕೊನೆಯುಸಿರೆಳೆದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿದೊಡ್ಡ ಗುತ್ತಿಗೆದಾರರು ಆಗಿದ್ದ ನಾಗಪ್ಪ ವಜ್ಜಲ್, ನಾರಾಯಣಪುರ ಜಲಾಶಯ ಕಾಮಗಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಲಿಂಗಸುಗೂರಿನಲ್ಲಿ ವಡ್ಡರ್ ಕಂಪನಿ ಆರಂಭಿಸಿ ಕಲ್ಯಾಣ ಕರ್ನಾಟಕ ಭಾಗದ ನೂರಾರು ಯುವಕರಿಗೆ ಉದ್ಯೋಗ ನೀಡಿದ್ದರು.

ಇದನ್ನೂ ಓದಿ: Water Crisis: ತುಂಗಭದ್ರಾ ಜಲಾಶಯ ಖಾಲಿ ಖಾಲಿ! ಮುಂದಿನೆರಡು ತಿಂಗಳಿಗೆ ಕೇವಲ 1 ಟಿಎಂಸಿ ಲಭ್ಯ

ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮಾತಾಗಿದ್ದ ನಾಗಪ್ಪ ವಜ್ಜಲ್, ನಾಗಪ್ಪ ಮಾಲೀಕರು ಎಂದೇ ಹೆಸರುವಾಸಿಯಾಗಿದ್ದರು. ಮೃತ ನಾಗಪ್ಪ ವಜ್ಜಲ್ ಅವರ ನಿಧನಕ್ಕೆ ಕ್ಷೇತ್ರದ ಜನ ಕಂಬನಿ ಮಿಡಿದಿದ್ದಾರೆ.

Exit mobile version