Site icon Vistara News

Rain News | ಮನೆಯ ಗೋಡೆ ಕುಸಿದು 13 ವರ್ಷದ ಬಾಲಕ ಸಾವು

Rain News

ಹಾಸನ : ಹಾಸನದಲ್ಲಿ ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಮಳೆ(Rain News) ಸುರಿಯುತ್ತಿದೆ. ಈ ಸಂದರ್ಭ ಸಂಭವಿಸಿದ ಅನಾಹುತವೊಂದರಲ್ಲಿ, ಮನೆಯ ಗೋಡೆ ಕುಸಿದು ಬಾಲಕ ಮೃತಪಟ್ಟಿದ್ದಾನೆ. ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಭೂವನಹಳ್ಳಿ ಗ್ರಾಮದ ವಿಜಯ್ ಕುಮಾರ್ ಎಂಬುವರ ಪುತ್ರ ಪ್ರಜ್ವಲ್ (13) ಮೃತಪಟ್ಟ ದುರ್ದೈವಿಯಾಗಿದ್ದಾನೆ.

ಇದನ್ನೂ ಓದಿ | ಗುಜರಾತ್​ನಲ್ಲಿ ಭೀಕರ ಮಳೆ: ಗೋಡೆ ಕುಸಿದು 8 ಮಂದಿ ಸಾವು, ಇನ್ನೂ 2 ದಿನ ವರುಣಾರ್ಭಟ ಸಾಧ್ಯತೆ

ಬಾಲಕ ಅಜ್ಜಿಯ ಪಕ್ಕ ಮಲಗಿದ್ದ ಎನ್ನಲಾಗಿದೆ. ತಡ ರಾತ್ರಿ ಗೋಡೆ ಕುಸಿದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ. ಅಜ್ಜಿಗೂ ಗಾಯವಾಗಿದೆ. ನುಗ್ಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲುಗೊಂಡಿದೆ.

Exit mobile version