Site icon Vistara News

Rain News: ಸಿರಿಗೇರಿ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಸಾವು; ರೈತನಿಗೆ ಗಾಯ

Rain News Bull killed by lightning in Sirigeri village The farmer is sick

ಕುರುಗೋಡು (ಬಳ್ಳಾರಿ): ಸಿಡಿಲು (Lightning) ಬಡಿದು ಜಮೀನಿನಲ್ಲಿದ್ದ ಎತ್ತು ಮೃತಪಟ್ಟಿದ್ದು, ರೈತ ಗಾಯಗೊಂಡಿರುವ ಘಟನೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಜರುಗಿದೆ‌.

ಗ್ರಾಮದ ಹೊರವಲಯದ ಜಮೀನಿನಲ್ಲಿ ರೈತ ಬಳ್ಳೊಳ್ಳಿ ಜಡೆಪ್ಪ ಕುಂಟೆ ಹೊಡೆಯುವಾಗ ಸಿಡಿಲು ಬಡಿದ ಎತ್ತು‌ ಸ್ಥಳದಲ್ಲಿಯೇ ಎತ್ತು ಮೃತಪಟ್ಟಿದೆ. ಸಣ್ಣ ಪುಟ್ಟ ಗಾಯವಾಗಿದ್ದ ಜಡೆಪ್ಪ ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಪೊಲೀಸ್ ಇಲಾಖೆ, ಸಂಬಂಧಪಟ್ಟ ಇಲಾಖೆಯವರು ಭೇಟಿ ನೀಡಿ‌ ಪರಿಶೀಲಿಸಿದರು.

Exit mobile version