Site icon Vistara News

Rain News: ಯಲಬುರ್ಗಾದ ಬೀರಲದಿನ್ನಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಸಾವು

lightning two person died in Seemandhra

ಕುಕನೂರು: ಸಿಡಿಲು (Lightning) ಬಡಿದು ರೈತ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಯಲಬುರ್ಗಾ ತಾಲೂಕಿನ ಬೀರಲದಿನ್ನಿ ಗ್ರಾಮದ‌ ಹೊರವಲಯದಲ್ಲಿ ಜರುಗಿದೆ.

ಕನಕಪ್ಪ (30) ಮೃತಪಟ್ಟ ರೈತ. ಮೃತ ಕನಕಪ್ಪ ಹೊಲದ ಕೆಲಸದಲ್ಲಿ ನಿರತನಾಗಿದ್ದಾಗ ಸಿಡಿಲು ಬಡಿದು ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನೆ‌ ಹಿನ್ನೆಲೆಯಲ್ಲಿ ಬೇವೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಬೇವೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Exit mobile version