Site icon Vistara News

Road Accident: ಶಿವಮೊಗ್ಗ, ರಾಯಚೂರಿನಲ್ಲಿ ಬೈಕ್‌ ಅಪಘಾತ; ಇಬ್ಬರು ಸವಾರರು ಮೃತ್ಯು

#image_title

ಶಿವಮೊಗ್ಗ/ ರಾಯಚೂರು: ಶಿವಮೊಗ್ಗದ ಮಲ್ಲಿಗೇನಹಳ್ಳಿ ಗ್ರಾಮದ ಎನ್.ಹೆಚ್. 206ರಲ್ಲಿ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ (Road Accident) ಘಟನೆ ನಡೆದಿದೆ.

ಎಸ್.ಜಿ.ಎಂ.ಟಿ. ಕಂಪೆನಿ ಲಿ. ಸಂಸ್ಥೆಗೆ ಸೇರಿದ ಬಸ್‌ ಇದಾಗಿದ್ದು, ಡಿಕ್ಕಿಯಾದ ರಭಸಕ್ಕೆ ಸ್ಕೂಟರ್‌ ಬಸ್‌ ಚಕ್ರದಡಿ ಸಿಲುಕಿಕೊಂಡಿದ್ದು, ಸಂಪೂರ್ಣ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸಂಚಾರಿ ಪಶ್ಚಿಮ ಪೊಲೀಸರು ಭೇಟಿ ನೀಡಿದ್ದು ಮೃತ ಯುವಕ ಜಾರ್ಖಂಡ್‌ ಮೂಲದ ಅನ್ಸಾರಿ ಎಂದು ಗುರುತು ಪತ್ತೆ ಆಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬೈಕ್‌ ಅಪಘಾತದಲ್ಲಿ ಮೃತಪಟ್ಟ ದಿಲೀಪ್‌

ಸರಣಿ ಬೈಕ್‌ ಅಪಘಾತದಲ್ಲಿ ಹಿಂಬದಿ ಸವಾರ ಸಾವು

ರಾಯಚೂರಿನ ಮಾನ್ವಿ ತಾಲೂಕಿನ ನೀರಮಾನ್ವಿ ಬಳಿ ಅತಿ ವೇಗವಾಗಿ ಬಂದ ಬೈಕ್‌ ಸವಾರನಿಂದ ಸರಣಿ ಅಪಘಾತವಾಗಿದೆ. ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ದಿಲೀಪ್(25) ಮೃತ ದುರ್ದೈವಿ.

ಬೈಕ್ ಓಡಿಸುತ್ತಿದ್ದ ಯಲ್ಲಾಲಿಂಗ (22) ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ಮಾನ್ವಿ ಮಾರ್ಗವಾಗಿ ಪಲ್ಸರ್ ಬೈಕ್‌ನಲ್ಲಿ ದಿಲೀಪ್‌ ಹಾಗೂ ಯಲ್ಲಾಲಿಂಗ ಬರುತ್ತಿದ್ದರು. ಈ ವೇಳೆ ಯಲ್ಲಾಲಿಂಗ ಬೈಕ್‌ನ ವೇಗ ಹೆಚ್ಚಿಸಿದ್ದಾನೆ. ಆಗ ಮುಂದೆ ಬರುತ್ತಿದ್ದ ರಮೇಶ್ ಎಂಬುವವರ ಬೈಕ್‌ಗೆ ಡಿಕ್ಕಿ ಆಗಿ, ಅದರಿಂದ ಮತ್ತೊಂದು ಬೈಕ್‌ಗೂ ಡಿಕ್ಕಿಯಾಗಿದೆ.

ಇದನ್ನೂ ಓದಿ: Suicide Case: ಬೆಂಗಳೂರಲ್ಲಿ ರೈಲಿಗೆ ತಲೆ ಕೊಟ್ಟು ಐಟಿ ಇನ್ಸ್‌ಪೆಕ್ಟರ್ ಆತ್ಮಹತ್ಯೆ; ಕೌಟುಂಬಿಕ ಕಲಹ ಶಂಕೆ

ಬೈಕ್‌ಗಳ ಸರಣಿ ಅಪಘಾತದಿಂದಾಗಿ ಯಲ್ಲಾಲಿಂಗನ ಜತೆ ಹಿಂದೆ ಕುಳಿತಿದ್ದ ದಿಲೀಪ್ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತರೆ ಬೈಕ್‌ ಸವಾರರಿಗೆ ಗಾಯಗಳಾಗಿದ್ದು, ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version