Site icon Vistara News

Road Accident : ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ; ದಂಪತಿ ಸಾವು; 3 ವರ್ಷದ ಮಗು ಅನಾಥ

Road Accident in Kanakagiri taluk

ಬಸವಕಲ್ಯಾಣ: ಚಲಿಸುತಿದ್ದ ಬೈಕ್‌ಗೆ (Bike) ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ದಂಪತಿ (Couple) ಮೃತಪಟ್ಟ ಘಟನೆ ತಾಲೂಕಿನ ಸಸ್ತಾಪೂರ ಬಂಗ್ಲಾ ಸಮೀಪ ಭಾನುವಾರ ಸಂಜೆ ಜರುಗಿದೆ.

ತಾಲೂಕಿನ ಜೋಗೆವಾಡಿ ಗ್ರಾಮದ ನಿವಾಸಿಗಳಾದ ಗುಂಡಪ್ಪ ಬಲಭೀಮ್ ಚಿಟಂಪಲ್ಲೆ(33), ಈತನ ಪತ್ನಿ ಸುಜಾತ ಗುಂಡಪ್ಪ ಚಿಟಂಪಲ್ಲೆ(29) ಘಟನೆಯಲ್ಲಿ ಮೃತಪಟ್ಟ ದಂಪತಿಯಾಗಿದ್ದಾರೆ.

ಮೂಲತಃ ಜೋಗೆವಾಡಿ ಗ್ರಾಮದ ನಿವಾಸಿಗಳಾದ ಇವರು ಕೊಂಗೆವಾಡಿ ಗ್ರಾಮದಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹುಮನಾಬಾದ್‌ ತಾಲೂಕಿನ ಹುಡುಗಿ ಗ್ರಾಮಕ್ಕೆ ತೆರಳುತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 65 ರ ಮೇಲಿರುವ ಸಸ್ತಾಪೂರ ಬಂಗ್ಲಾ ಸಮೀಪ ಹಿಂಬದಿಯಿಂದ ಬಂದ ಅಪರಿಚಿತ ವಾಹನ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: Family dispute: ಆತ್ಮಹತ್ಯೆಗೆ ಯತ್ನಿಸಿದ ತಾಯಿ ಬಚಾವ್‌; ರಕ್ಷಿಸಲು ಕೆರೆಗೆ ಜಿಗಿದ ತಂದೆ, ಮಕ್ಕಳು ಸಾವು

ಘಟನೆಯಲ್ಲಿ ಪತಿ ಗುಂಡಪ್ಪ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಈತನ ಪತ್ನಿ ಸುಜಾತಾಗೆ ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಸುಜಾತಾ ಸಹ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದು ಬಂದಿದೆ.

ತಂದೆ ತಾಯಿ ಜೊತೆಗೆ ಬೈಕ್‌ನಲ್ಲಿ ಪ್ರಯಾಣಿಸುತಿದ್ದ 3 ವರ್ಷದ ಬಾಲಕ ಶ್ರೀಹರಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಆದರೆ ಏನೂ ಅರಿಯದ ಬಾಲಕ ತಂದೆ ಹಾಗೂ ತಾಯಿಯನ್ನು ಏಕಕಾಲದಲ್ಲಿ ಕಳೆದುಕೊಂಡು ಅನಾಥವಾಗಿದ್ದಾನೆ.

ಇದನ್ನೂ ಓದಿ: Narendra Modi: ಆಸ್ಟ್ರೇಲಿಯಾದಲ್ಲೂ ಅದ್ಧೂರಿ ಸ್ವಾಗತ; ಭಾರತ್‌ ಮಾತಾ ಕಿ ಜೈ, ಹರ ಹರ ಮೋದಿ ಘೋಷಣೆ

ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಕಾರಣವಾದ ಅಪರಿಚಿತ ವಾಹನದ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Exit mobile version