Site icon Vistara News

Road Accident: ಎರಡು ಬೈಕ್‌ ಡಿಕ್ಕಿಯಾಗಿ ತಂದೆ, ಮಗಳ ಸಾವು

]cashless medical treatment for accident victims by central Government

ಕೂಡ್ಲಿಗಿ: ಎರಡು ಬೈಕುಗಳ (Bikes) ಪರಸ್ಪರ ಡಿಕ್ಕಿಯಾಗಿ ತಂದೆ, ಮಗಳು ಮೃತಪಟ್ಟ ಘಟನೆಯು ತಾಲೂಕಿನ ಗುಡೇಕೋಟೆ ಕೆರೆ ಏರಿ ಮೇಲೆ ಶನಿವಾರ ಸಂಜೆ ಜರುಗಿದೆ. ಮೃತರನ್ನು ತಾಲೂಕಿನ ಯರ‍್ರೋಬಯ್ಯನಹಟ್ಟಿಯ ಗೋವಿಂದ (30) ಹಾಗೂ ಇವರ ಮಗಳು ಖುಷಿ (3) ಎಂದು ಗುರುತಿಸಲಾಗಿದೆ.

ಗೋವಿಂದ ತನ್ನ ಪತ್ನಿ ಹಾಗೂ ಮಗಳೊಂದಿಗೆ ಗುಡೇಕೋಟೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಜೆ ತನ್ನ ಊರು ಯರ‍್ರೋಬಯ್ಯನಹಟ್ಟಿ ಗ್ರಾಮಕ್ಕೆ ಹೊರಟಿದ್ದರು. ಈ ವೇಳೆ ಕೆರೆ ಏರಿ ಮೇಲೆ ಗೋವಿಂದನ ಬೈಕ್‌ ಹಾಗೂ ಎದುರಿನಿಂದ ಬಂದ ಬಳ್ಳಾರಿ ಸಮೀಪದ ಸಿಂದುವಾಳ ಗ್ರಾಮದ ರಾಘವೇಂದ್ರ ಅವರ ಬೈಕು ಡಿಕ್ಕಿಯಾಗಿವೆ.

ಇದರಿಂದ ಗೋವಿಂದ, ಆತನ ಪತ್ನಿ, ಮಗಳು ಮತ್ತು ಮತ್ತೊಂದು ಬೈಕಿನಲ್ಲಿದ್ದ ರಾಘವೇಂದ್ರ ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನು ಗುಡೇಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಇದೇ ವೇಳೆ ಖುಷಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಉಳಿದ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸಗೆ ಕಳುಹಿಸಲಾಗಿತ್ತು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಗೋವಿಂದ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಮೃತ ಗೋಂವಿದನ ಪತ್ನಿ ಮಲ್ಲಮ್ಮ ಹಾಗೂ ಸಿಂದುವಾಳ ಗ್ರಾಮದ ರಾಘವೇಂದ್ರ ಅವರು ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Navaratri: ದಸರಾ ಎಫೆಕ್ಟ್‌; ಊರಿನತ್ತ ಮುಖಮಾಡಿದ ರಾಜಧಾನಿಯ ಜನ, ಬಸ್‌ಗಳು ಫುಲ್‌ ರಶ್, ಟ್ರಾಫಿಕ್‌ ಜಾಮ್‌

ಘಟನಾ ಸ್ಥಳಕ್ಕೆ ಗುಡೇಕೋಟೆ ಪಿಎಸೈ ಪ್ರಕಾಶ್ ಸಿ. ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಗುಡೇಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version