Site icon Vistara News

Road accident | ಒಮ್ನಿ ಮತ್ತು ಕೆಎಸ್ಸಾರ್ಟಿಸಿ ಬಸ್‌ ನಡುವೆ ಮುಖಾಮುಖಿ ಡಿಕ್ಕಿ: ಮಟನ್‌ ವ್ಯಾಪಾರಿ ಸಾವು

harapanahalli accident

ವಿಜಯನಗರ: ಕೆಎಸ್ಸಾರ್ಟಿಸಿ ಬಸ್‌ ಮತ್ತು ಒಮ್ನಿ ಮತ್ತು ಮುಖಾಮುಖಿ ಡಿಕ್ಕಿ (Road accident) ಸಂಭವಿಸಿ ಒಮ್ನಿ ಚಾಲಕ, ಮಟನ್‌ ವ್ಯಾಪಾರಿ ಮಹೇಶ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಹರಪನಹಳ್ಳಿಯಲ್ಲಿ ಈ ದುರ್ಘಟನೆ ಸೋಮವಾರ ನಡೆಯಿತು.

ಸೊರಬದಲ್ಲಿ ಮಟನ್ ಅಂಗಡಿಯ ಮಾಲೀಕರಾಗಿರುವ ಮಹೇಶ್ ತಮ್ಮದೇ ಮಾರುತಿ ಒಮ್ನಿಯಲ್ಲಿ ಸಾಗುತ್ತಿದ್ದಾಗ ಎದುರಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ಸನ್ನು ಪೂರ್ಣವಾಗಿ ಗಮನಿಸದೆ ಇದ್ದುದು ಅಪಘಾತಕ್ಕೆ ಕಾರಣವಾಗಿದೆ. ಬಸ್ ಗುದ್ದಿದ ರಭಸಕ್ಕೆ ಒಮಿನಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಸ್ಥಳದಲ್ಲೇ ದುರ್ಮರಣ ಕಂಡರು.

ಮಹೇಶ್‌ ಅವರು ಸೊರಬ ಗ್ರಾಮಸ್ಥರೇ ಆಗಿದ್ದು, ಎಲ್ಲರ ಜತೆಗೆ ಸ್ನೇಹಜೀವಿಯಾಗಿದ್ದರು. ಹರಪನಹಳ್ಳಿಯ ತಾಲೂಕಿನಲ್ಲಿ ನಡೆದಿದ್ದು, ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road accident | ಕಾರ್ಕಳದ ತಿರುವಿನಲ್ಲಿ ಮಗುಚಿಬಿದ್ದ ಕೊಟ್ಟೂರು ಶಾಲಾ ಮಕ್ಕಳ ಪ್ರವಾಸಿ ಬಸ್‌: 3 ಶಿಕ್ಷಕಿಯರು, 2 ಮಕ್ಕಳಿಗೆ ಗಾಯ

Exit mobile version