Site icon Vistara News

Sagara News | ಗಿಫ್ಟ್ ತಯಾರಿ ಘಟಕದಲ್ಲಿ ಅಗ್ನಿ ಆಕಸ್ಮಿಕ, ತಪ್ಪಿದ ಪ್ರಾಣಾಪಾಯ

Fire accident sagara Raj gudi Industrial Unit

ಸಾಗರ: ನಗರದ (Sagara News) ಆರ್‌ಎಂಸಿ ಪಕ್ಕದ ಈಳಿ ರಸ್ತೆಯಲ್ಲಿರುವ ರಾಜ್ ಗುಡಿ ಕೈಗಾರಿಕಾ ಘಟಕದಲ್ಲಿ ಸೋಮವಾರ (ಡಿ.೨೬) ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಕಲಾಕೃತಿ ತಯಾರಿಕಾ ಕಚ್ಚಾ ವಸ್ತುಗಳು ಸುಟ್ಟು ಕರಕಲಾಗಿವೆ.

ಗಿಫ್ಟ್ ತಯಾರಿಕಾ ಘಟಕದ ಮಾಲೀಕರು ಕುಟುಂಬ ಸಮೇತ ಬೇರೆ ಊರಿಗೆ ಹೋದ ಸಂದರ್ಭದಲ್ಲಿ ಈ ಅನಾಹುತ ನಡೆದಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸಹಕಾರದಿಂದ ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಘಟಕದಲ್ಲಿದ್ದ ಕಲಾಕೃತಿಗಳು, ಪ್ಲೈವುಡ್, ಅದಕ್ಕೆ ಬೇಕಾದ ಕಚ್ಚಾ ಸಾಮಗ್ರಿ ಸೇರಿ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಇದರಿಂದ ಭಾರಿ ಅನಾಹುತ ತಪ್ಪಿದೆ. ಘಟಕದಲ್ಲಿ ತಯಾರಿಸಿ ಇಡಲಾಗಿದ್ದ ನೂರಾರು ಕಲಾಕೃತಿಗಳನ್ನು ಸುರಕ್ಷಿತವಾಗಿ ಇಡುವಲ್ಲಿ ಸ್ಥಳೀಯರು ಸಹಕರಿಸಿದ್ದಾರೆ. ಬೆಂಕಿಯ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ.

ಕಳೆದ 25 ವರ್ಷಗಳಿಗೂ ಹೆಚ್ಚು ಕಾಲದಿಂದ ಮರದ ಕಲಾಕೃತಿಗಳನ್ನು ಕೆತ್ತನೆ ಮಾಡುತ್ತಿದ್ದ ಪ್ರಭಾಕರ್ ಹಾಗೂ ಪುತ್ರ ಮಹೇಶ್‍ ಅವರಿಗೆ ಸೇರಿದ್ದ ರಾಜ್ ಹ್ಯಾಂಡಿಕ್ರಾಫ್ಟ್ ಘಟಕವು ಸುಮಾರು ಒಂದು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿರಲಿಲ್ಲ. 20ಕ್ಕೂ ಹೆಚ್ಚು ಕಾರ್ಮಿಕರು ಈ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | ‌SCST Reservation | ದಲಿತ ಮೀಸಲಾತಿ ಹೆಚ್ಚಿಸುವ ಮಸೂದೆಗೆ ವಿಧಾನಸಭೆ ಒಪ್ಪಿಗೆ: ಬಿಜೆಪಿಯೇ ಮೀಸಲಾತಿ ಪರ ಎಂದ ಸರ್ಕಾರ

Exit mobile version