Site icon Vistara News

ಬೇಗೂರು ಬೆಂಗಾಲಿ ಕಲ್ಚರಲ್​ ಅಸೋಸಿಯೇಷನ್​​ನಿಂದ ಶರದ್​ ಉತ್ಸವ; ಸೆ.30ಕ್ಕೆ ಉದ್ಘಾಟನೆ

Sharad Utsav

ಬೆಂಗಳೂರು: ಬೇಗೂರು ಬೆಂಗಾಲಿ ಕಲ್ಚರಲ್​ ಅಸೋಸಿಯೇಷನ್ ವತಿಯಿಂದ ವಿಜಯದಶಮಿ ಪ್ರಯುಕ್ತ ‘ಶರದ್​ ಉತ್ಸವ-2022’ ಕಾರ್ಯಕ್ರಮವನ್ನು ಅಕ್ಷಯ ನಗರದ ಡಿಎಲ್ಎಫ್ ನ್ಯೂಟೌನ್ ನ ಎಕ್ಸಿಬಿಷನ್ ಗ್ರೌಂಡ್​​​ನಲ್ಲಿ ಸೆಪ್ಟೆಂಬರ್​ 30ರಿಂದ ಅಕ್ಟೋಬರ್​ 5ರವರೆಗೆ ಅದ್ದೂರಿಯಾಗಿ ಆಯೋಜನೆ ಮಾಡಲಾಗಿದೆ. ಈ ಉತ್ಸವದ ಪೂರ್ವಭಾವಿ ಸಭೆ ಇಂದು ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆಯಿತು.

ಶರದ್​ ಉತ್ಸವ -2022ರ ನಿಮಿತ್ತ ಮಹಾಪಂಚಮಿ ಪೂಜೆ, ಮಹಾಸಸ್ತಿ, ಮಹಾ ಸಪ್ತಮಿ, ಮಹಾ ಅಸ್ತಮಿ, ಮಹಾ ನವಮಿ ಹಾಗೂ ಮಹಾ ದಶಮಿ ಪೂಜೆಗಳನ್ನ ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 30 ರಂದು ಶರದ ಉತ್ಸವ ಕಾರ್ಯಕ್ರಮವನ್ನ ರಾಮಕೃಷ್ಣ ಮಿಷನ್​​​ನ ಸ್ವಾಮಿ ಆತ್ಮವಿದಾನಂದಜಿ ಮಹಾರಾಜ್, ಸಂಸದ ತೇಜಸ್ವಿ ಸೂರ್ಯ, ನಟಿ ಪ್ರಿಯಾಂಕಾ ಉಪೇಂದ್ರ, ಶಾಸಕ ಸತೀಶ್ ರೆಡ್ಡಿ ಉದ್ಘಾಟಿಸುವರು. ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ 2 ಗಂಟೆಯವರೆಗೆ ದುರ್ಗಾದೇವಿಗೆ ವಿಶೇಷ ಪೂಜೆ ಕೈಂಕರ್ಯಗಳನ್ನ ಹಮ್ಮಿಕೊಂಡಿದ್ದು, 2 ಗಂಟೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಈ ಉತ್ಸವದಲ್ಲಿ ಅಪಾರ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ ಎಂದು ಬೇಗೂರು ಬೆಂಗಾಲಿ ಕಲ್ಚರಲ್ ಅಸೋಸಿಯೇಷನ್​​ನ ಸದಸ್ಯೆಯರಾದ ಶ್ವೇತಾ ಮತ್ತು ಅನುಶ್ರೀ ತಿಳಿಸಿದ್ದಾರೆ.

ಇದನ್ನೂ ಓದಿ: Navratri Colours Trend | ನವರಾತ್ರಿಯ 9 ಬಣ್ಣದ ಟ್ರೆಡಿಷನಲ್‌ ಔಟ್‌ಫಿಟ್ಸ್‌ಗೆ ಸಿಂಪಲ್‌ ಐಡಿಯಾ

Exit mobile version