Site icon Vistara News

Shivamogga News: ಸಾಗರದಲ್ಲಿ ಗಜಾನನ ಸಾರಿಗೆ ಬಸ್‍ಗೆ ಆಕಸ್ಮಿಕ ಬೆಂಕಿ

Accidental fire of transport bus in Sagara

ಸಾಗರ: ತಾಲೂಕಿನ ಆನಂದಪುರಂ ರೈಲ್ವೆ ಗೇಟ್ ಹತ್ತಿರ ಕಳೆದ ಎರಡು ದಿನಗಳಿಂದ ಕೆಟ್ಟು ನಿಂತಿದ್ದ ಗಜಾನನ ಸಾರಿಗೆ ಬಸ್‍ನಲ್ಲಿ (Bus) ಆಕಸ್ಮಿಕ ಬೆಂಕಿ (Accidental fire) ಕಾಣಿಸಿಕೊಂಡು, ಭಾಗಶಃ ಹಾನಿಯಾದ ಘಟನೆ ಸೋಮವಾರ ನಡೆದಿದೆ.

ಎರಡು ದಿನಗಳ ಹಿಂದೆ ಬಸ್ ಹಾಳಾಗಿದ್ದರಿಂದ ರೈಲ್ವೆ ಗೇಟ್ ಸಮೀಪ ನಿಲ್ಲಿಸಲಾಗಿತ್ತು ಸೋಮವಾರ ಬೆಳಗ್ಗೆ ಚಾಲಕ ಮತ್ತು ನಿರ್ವಾಹಕ ಕೆಳಗೆ ಇಳಿದು ಹೋಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಆಕಸ್ಮಿಕ ಬೆಂಕಿ ತಗುಲಿದ್ದರಿಂದ ಬಸ್ ಶೇ. 75 ರಷ್ಟು ಸುಟ್ಟು ಹೋಗಿದೆ. ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.

ಈ ಕುರಿತು ಆನಂದಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version