Site icon Vistara News

Shivamogga News | ಸಿದ್ದೇಶ್ವರ ಶ್ರೀಗಳ ನಿಧನ: ಬಿಜೆಪಿ ಮುಖಂಡರಿಂದ ಸಂತಾಪ ಸಭೆ

Siddeshwara Sree Condolence meeting

ಶಿವಮೊಗ್ಗ: ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಶಿವಮೊಗ್ಗ (Shivamogga News) ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ (ಜ.೫) ಸಂತಾಪ ಸಭೆ ನಡೆಯಿತು.

ಬಿಜೆಪಿ ಮುಖಂಡರು ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಎರಡು ನಿಮಿಷ ಮೌನಾಚರಣೆ ಮೂಲಕ ಅಗಲಿದ ಶ್ರೀಗಳಿಗೆ ಸಂತಾಪ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಿದ್ದೇಶ್ವರ ಶ್ರೀಗಳು ಶಿಸ್ತಿಗೆ ಹೆಸರುವಾಸಿಯಾಗಿದ್ದರು. ಅವರ ಪ್ರವಚನ ಕೇಳಲು ಜನರು ಮುಂಚಿತವಾಗಿ ಬಂದು ಕೂರುತ್ತಿದ್ದರು. ಅವರ ಉಪನ್ಯಾಸದಲ್ಲಿ ಧರ್ಮ, ದೇಶದ ಅಂಶಗಳೇ ಹೆಚ್ಚಾಗಿರುತ್ತಿತ್ತು. ಶ್ರೀಗಳು ನಿರಂತರವಾಗಿ ಅಧ್ಯಯನ ಮಾಡುತ್ತಾ ಇದ್ದರು. ಬಹಳ ಮೇಧಾವಿ ಕೂಡ. ಅವರ ಪ್ರವಚನ ಕೇಳುತ್ತಿದ್ದರೆ, ದೇವರೇ ಬಂದು ಹೇಳುವಂತೆ ಭಾಸವಾಗುತ್ತಿತ್ತು. ಇಂತಹ ವ್ಯಕ್ತಿಯನ್ನು ಕಳೆದುಕೊಂಡು ನಾವೆಲ್ಲರೂ ನಷ್ಟ ಅನುಭವಿಸಿದ್ದೇವೆ ಎಂದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ನಗರಾಧ್ಯಕ್ಷ ಜಗದೀಶ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

ಇದನ್ನೂ ಓದಿ | Hardik Pandya | ಪಾಂಡ್ಯನಿಗೆ ಪರ್ಯಾಯ ಕಂಡುಕೊಳ್ಳದಿದ್ದರೆ ಟೀಮ್​ ಇಂಡಿಯಾಗೆ ಆಪತ್ತು ಎಂದ ಮಾಜಿ ಆಟಗಾರ

Exit mobile version