Site icon Vistara News

ಎಣ್ಣೆ ಏಟಿನ ಎಫೆಕ್ಟ್, ಚಲಿಸುತ್ತಿದ್ದ ರೈಲಿಗೆ ಕಾಲು ಕೊಟ್ಟ ಭೂಪ, ಕಾಲು ತುಂಡಾಗಿದ್ದೂ ಗೊತ್ತಾಗಲಿಲ್ಲ!

alcohol effect

ಶಿವಮೊಗ್ಗ: ಕುಡಿದ ಮತ್ತು ಹಾಗೂ ಜರ್ದಾ ಅಮಲು ತಲೆಗೇರಿ, ರೈಲು ಬರುತ್ತಿದ್ದರೂ ಹಳಿಯ ಮೇಲೇ ಕುಳಿತು ಕಾಲು ಕಟ್‌ ಆಗಿಹೋದ ಮೇಲೂ ನಿರ್ಭಾವುಕವಾಗಿ ಅದನ್ನೇ ನೋಡುತ್ತಾ ಕುಳಿತಿದ್ದ ಈತ! ಇದು ಶಿವಮೊಗ್ಗದಲ್ಲಿ ನಡೆದ ಘಟನೆ.

ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ರೈಲ್ವೆ ಫ್ಲೈಓವರ್ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರೈಲ್ವೆ ಕಾಮಗಾರಿಗಾಗಿ ಬಿಹಾರದಿಂದ ಬಂದಿರುವ ಕೂಲಿ ಕಾರ್ಮಿಕನ ಕಾಲು ಕಟ್ ಆಗಿದೆ. ಆದಿಲ್‌ (16) ಕುಡಿದ ಮತ್ತಿನಲ್ಲಿದ್ದು, ಜತೆಗೆ ಜರ್ದಾ ಕೂಡ ಜಗಿಯುತ್ತಿದ್ದು, ರೈಲು ಬರುತ್ತಿದ್ದರೂ ನಿರ್ಲಕ್ಷ್ಯದಿಂದ ಹಳಿಯ ಮೇಲೇ ಕುಳಿತಿದ್ದ. ತಾಳಗುಪ್ಪದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ರೈಲು ಆತನ ಕಾಲಿನ ಮೇಲೆ ಚಲಿಸಿ ಕಾಲನ್ನು ತುಂಡು ಮಾಡಿದೆ.

ಕಾಲು ತುಂಡಾದರೂ ನೋವಿನ ಅನುಭವವಿಲ್ಲದೆ ಆದಿಲ್‌ ತುಂಡಾದ ಕಾಲು ನೋಡುತ್ತಾ ಕುಳಿತಿದ್ದ. ಸ್ಥಳೀಯರು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ತರಿಸಿ ಗಾಯಾಳು ಯುವಕನನ್ನು ತುಂಡಾದ ಕಾಲಿನ ಜೊತೆಗೆ ನಗರದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಿದ್ದಾರೆ.

ಇದನ್ನೂ ಓದಿ | Illicit relationship | ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಐಬಿಎಂ ಉದ್ಯೋಗಿ ಆತ್ಮಹತ್ಯೆ

Exit mobile version