Site icon Vistara News

Hosanagara News: ಹೊಸನಗರದಲ್ಲಿ ಭಾರತ್ ರೈಸ್ ವಿತರಣೆಗೆ ಶಾಸಕ ಆರಗ ಚಾಲನೆ

MLA Araga jnanendra drive for distribution of Bharat Rice in Hosanagara

ಹೊಸನಗರ: ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಬುಧವಾರ ಭಾರತ್ ರೈಸ್ (Bharat Rice) ವಿತರಣೆ ಕಾರ್ಯಕ್ರಮಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ (Hosanagara News) ನೀಡಿದರು.

ಇದನ್ನೂ ಓದಿ: Semiconductor : ಧೊಲೆರಾದಲ್ಲಿ ದೇಶದ ಮೊದಲ ಸೆಮಿಕಂಡಕ್ಟರ್ ಘಟಕ, ಜಾಗತಿಕ ಭವಿತವ್ಯದಲ್ಲಿ ಏನಿದರ ಪ್ರಾಮುಖ್ಯ?

ಬಳಿಕ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಭಾರತ್‌ ರೈಸ್‌ ಅಕ್ಕಿಯು ಎಲ್ಲ ವರ್ಗದ ಜನರಿಗೂ ದೊರೆಯಲಿದೆ. ಅತ್ಯಂತ ಕಡಿಮೆ ದರದಲ್ಲಿ ದೊರೆಯುವ ಅಕ್ಕಿಯನ್ನು ಎಲ್ಲರೂ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: IPL 2024 : ಐಪಿಎಲ್​ ಇತಿಹಾಸದಲ್ಲಿ ದಾಖಲಾಗಿರುವ ಅತಿವೇಗದ ಶತಕಗಳ ವಿವರ ಈ ಕೆಳಗಿನಂತಿದೆ

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಎನ್.ಆರ್. ದೇವಾನಂದ್, ಸುರೇಶ್ ಸ್ವಾಮಿರಾವ್, ಶ್ರೀಪತಿರಾವ್, ಮಂಜುನಾಥ್, ಸಂಜೀವಣ್ಣ, ಗಣಪತಿ ಬಿಳಗೋಡು, ಎನ್. ಶ್ರೀಧರ ಉಡುಪ, ಕೋಣೆಮನೆ ಶಿವಕುಮಾರ್, ಕಾಲಸಸಿ ಸತೀಶ್, ಸತ್ಯನಾರಾಯಣ ವಿ., ವಿಜಯ ಕುಮಾರ್, ಗುಲಾಬಿ ಮರಿಯಪ್ಪ, ಕೃಷ್ಣವೇಣಿ, ಮಂಡಾನಿ ಮೋಹನ್ ಹಾಗೂ ಬಸವರಾಜ್, ನರಲೆ ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version