Site icon Vistara News

Nada Namana | ಡಿ.4ರಂದು ಶಿವಮೊಗ್ಗದಲ್ಲಿ ಅರುಣ ಹಂಪಿಹೊಳಿಗೆ ನುಡಿ, ನಾದ ನಮನದೊಂದಿಗೆ ಶ್ರದ್ಧಾಂಜಲಿ

Nada Namana

ಶಿವಮೊಗ್ಗ: ಬೆಂಗಳೂರಿನ ಸಪ್ತಕ ಸಂಸ್ಥೆ ಹಾಗೂ ಸಪ್ತಸ್ವರ ಸಂಗೀತ ಸಭಾ ಸಹಯೋಗದಲ್ಲಿ ನಗರದ ಕುವೆಂಪು ರಂಗ ಮಂದಿರದಲ್ಲಿ ಡಿ.4ರಂದು ಸಂಜೆ 5 ಗಂಟೆಗೆ ಅರುಣ ಹಂಪಿಹೊಳಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನುಡಿ ನಮನ ಹಾಗೂ ನಾದ ನಮನದ(Nada Namana) ಮೂಲಕ ಮೃತರಿಗೆ ಗೌರವ ನಮನ ಸಲ್ಲಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಸಪ್ತಕ ಸಂಚಾಲಕ ಜಿ.ಎಸ್.ಹೆಗಡೆ ಹಾಗೂ ಶಿವಮೊಗ್ಗದ ಸಂಗೀತ ಸಭಾ ವತಿಯಿಂದ ನುಡಿ ನಮನ ಸಲ್ಲಿಸಲಾಗುತ್ತದೆ. ನಾದ ನಮನ ಕಾರ್ಯಕ್ರಮವನ್ನು ಬೆಂಗಳೂರಿನ ಗಾಯಕ ಸಿದ್ಧಾರ್ಥ ಬೆಳ್ಳಣ್ಣು, ತಬಲಾ ವಾದಕ ರೂಪಕ ಕಲ್ಲೂರಕರ್, ವಯೋಲಿನ್ ವಾದಕ ರಂಜನ್ ಕುಮಾರ್ ಬೆವುರಾ, ಯಲ್ಲಾಪುರದ ಹೆಗ್ಗಾರದ ಹಾರ್ಮೋನಿಯಂ ವಾದಕ ಸತೀಶ ಭಟ್ಟ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ | Kannada Sahitya Parishat | ಪಿ.ಕೆ. ನಾರಾಯಣ ದತ್ತಿ ಪ್ರಶಸ್ತಿಗೆ ಡಾ. ಸುರೇಶ ಪಾಟೀಲ್, ಎಲ್.ವಿ. ಶಾಂತಕುಮಾರಿ ಆಯ್ಕೆ

Exit mobile version