Site icon Vistara News

Sagara News : ಸೋಲು ಅನಾಥ, ಗೆಲುವಿಗೆ ಸಾವಿರ ಜನ: ಮಾಜಿ ಶಾಸಕ ಹರತಾಳು ಹಾಲಪ್ಪ

#image_title

ಹೊಸನಗರ: “ಪ್ರಜಾಪ್ರಭುತ್ವದಲ್ಲಿ ಸೋಲು ಸಾಮಾನ್ಯ. ಸೋಲು ತಾತ್ಕಾಲಿಕ ಮಾತ್ರ ಇರುತ್ತದೆ. ಮುಂದೆ ಒಳ್ಳೆಯ ದಿನಗಳು ನಮಗೆ ದೊರೆಯಲಿದೆ” ಎಂದು ಸಾಗರ (Sagara News) ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹರತಾಳು ಹಾಲಪ್ಪ ಅಭಿಪ್ರಾಯಪಟ್ಟರು.

ಹೊಸನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಇಂದು ಮತದಾರರ ಅಭಿನಂದನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, “ಸೋಲು ಅನಾಥ, ಗೆಲುವಿಗೆ ಸಾವಿರಾರು ಜನ ಇರುತ್ತಾರೆ. ಸೋಲಿನಿಂದ ಧೃತಿಗೆಡುವುದಿಲ್ಲ. ಮುಂದೆ ಮತ್ತೆ ಒಳ್ಳೆಯ ದಿನಗಳು ನಮ್ಮ ಪಾಲಿಗೆ ಬರಲಿದೆ. ಕಾರ್ಯಕರ್ತರು ಧೃತಿಗೆಡಬಾರದು. ಕಾರ್ಯಕರ್ತರ ಕಷ್ಟ ಸುಖದಲ್ಲಿ ಸದಾ ಇರುತ್ತೇನೆ. ಲೋಪದೋಷಗಳನ್ನು ಸರಿಪಡಿಸಿಕೊಂಡು ಸಂಘಟನೆಯನ್ನು ಬಲಗೊಳಿಸುತ್ತ ಹೆಜ್ಜೆ ಹಾಕುತ್ತೇನೆ” ಎಂದರು.

ಇದನ್ನೂ ಓದಿ: Sagar Election Results: ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿದ ಬೇಳೂರು; ಸೋಲು ಕಂಡ ಹಾಲಪ್ಪ
“ಕ್ಷೇತ್ರದ ಅಭಿವೃದ್ಧಿ ಸಾಕಷ್ಟು ಮಾಡಿದ್ದರೂ ಅಭಿವೃದ್ಧಿ ಮತಗಳಾಗಿ ಬದಲಾಗದೇ ಸೋಲು ಅನುಭವಿಸುವಂತಾಯಿತು. ನಮಗೆ ಮತ ನೀಡಿದ ಮತದಾರರು ಮತ್ತು ಹಗಲು ಇರಲು ಚುನಾವಣೆಗಾಗಿ ಶ್ರಮಿಸಿದ ಮುಖಂಡರು, ಕಾರ್ಯಕರ್ತರುಗಳಿಗೆ ಅಭಿನಂದನೆಗಳು” ಎಂದರು.

ಹೊಸನಗರ ಮಂಡಲ ಬಿಜೆಪಿ ಅಧ್ಯಕ್ಷ ಗಣಪತಿ ಬೆಳಗೋಡು, ಕಾರ್ಯದರ್ಶಿ ನಾಗಾರ್ಜುನ ಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಪ್ರಮುಖರಾದ ಉಮೇಶ್ ಕಂಚುಗಾರ್, ದೇವಾನಂದ್, ಶಕ್ತಿಕೇಂದ್ರದ ಅಧ್ಯಕ್ಷರಾದ ಮನೋದರ, ಇತರ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.

Exit mobile version