Site icon Vistara News

Sagara News | ಉತ್ತಮ ಶಿಕ್ಷಕರನ್ನು ಬೇರೆಡೆ ನಿಯೋಜನೆ ವಿರೋಧಿಸಿ ಬರೂರು ಶಾಲೆಯಲ್ಲಿ ಮಕ್ಕಳು, ಗ್ರಾಮಸ್ಥರ ಪ್ರತಿಭಟನೆ

Protest K R Bimba Barur Village

ಸಾಗರ : (Sagara News) ಕಸಬಾ ಹೋಬಳಿಯ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದ ಶಿಕ್ಷಕ ಶಿವಪ್ಪ ಎಂಬುವವರನ್ನು ಬೇರೆಡೆಗೆ ನಿಯೋಜನೆ ಮಾಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್. ಬಿಂಬಾ ವಿರುದ್ಧ ಶಾಲಾ ಮಕ್ಕಳು, ಎಸ್‌ಡಿಎಂಸಿ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಸಾಗರದ ಕಸಬಾ ಹೋಬಳಿಯ ಬರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಕೂಡಲೇ ನಿಯೋಜನೆಯಾದ ಶಿಕ್ಷಕ ಶಿವಪ್ಪ ಅವರನ್ನು ಪುನಃ ಇದೇ ಶಾಲೆಗೆ ನಿಯೋಜನೆ ಮಾಡದೇ ಹೋದರೆ ಸೋಮವಾರದಿಂದ ಶಾಲೆಗೆ ಶಾಲಾ ಮಕ್ಕಳನ್ನು ಕಳುಹಿಸದೆ, ಶಾಲಾ ಆವರಣದಲ್ಲಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಬರೂರು ಗ್ರಾಪಂ ಉಪಾಧ್ಯಕ್ಷ ಮಂಜುನಾಥ್, ಎಸ್‌ಡಿಎಂಸಿ ಸದಸ್ಯ ಶಿವಕುಮಾರ್, ಪಾಲಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಇದನ್ನೂ ಓದಿ | Border Dispute | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ಅಮಿತ್‌ ಶಾರನ್ನು ಭೇಟಿಯಾದ ಶಿವಸೇನೆ, ಎನ್‌ಸಿಪಿ, 14ಕ್ಕೆ ಸಿಎಂಗಳ ಸಭೆ?

Exit mobile version