Site icon Vistara News

Shivamogga News: ಆರ್ಥಿಕ ಬಲವರ್ಧನೆಯಲ್ಲಿ ಸಹಕಾರ ರಂಗದ ಕೊಡುಗೆ ಅಪಾರ: ಬಸವರಾಜ ಶೇಟ್

All India Cooperation Week at Soraba

ಸೊರಬ: ರೈತರಿಗೆ (Farmers) ಹಾಗೂ ಜನತೆಗೆ ಸಾಲ ಸೌಲಭ್ಯ ನೀಡುತ್ತಾ ದೇಶದ ಆರ್ಥಿಕ ಬಲವರ್ಧನೆಯಲ್ಲಿ ಸಹಕಾರ ರಂಗದ ಕೊಡುಗೆ (Contribution) ಅಪಾರವಾಗಿದೆ ಎಂದು ಶ್ರೀ ರಂಗನಾಥ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಂದಗಿ ಬಸವರಾಜ ಶೇಟ್ ಹೇಳಿದರು.

ಪಟ್ಟಣದ ಶ್ರೀ ರಂಗನಾಥ ವಿವಿಧೋದ್ದೇಶ ಸಹಕಾರ ಸಂಘದ ಆವರಣದಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಸಹಕಾರಿ ಧ್ವಜಾರೋಹಣ ನೆರವೇರಿಸಿ, ಬಳಿಕ ಅವರು ಮಾತನಾಡಿದರು.

ಸಹಕಾರಿ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳಾಗಿದ್ದು, ಬ್ಯಾಂಕಿಂಗ್ ಕ್ಷೇತ್ರಕ್ಕೆ ಬಹುದೊಡ್ಡ ಶಕ್ತಿಯಾಗಿ ಬೆಳೆದಿದೆ. ಸರ್ಕಾರದ ಅನುದಾನಗಳನ್ನು ನೂರಕ್ಕೆ ನೂರರಷ್ಟು ಸಹಕಾರಿ ಕ್ಷೇತ್ರವೂ ಜನತೆಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: Benefits Of Yam: ಚಿನ್ನದಂಥ ಸುವರ್ಣ ಗಡ್ಡೆಯನ್ನು ತಿಂದವರೇ ಗಟ್ಟಿ!

ಪಟ್ಟಣದ ಶ್ರೀ ರಂಗನಾಥ ವಿವಿಧೋದ್ದೇಶ ಸಹಕಾರ ಸಂಘವು ಶತಮಾನವನ್ನು ಪೂರೈಸಿದ್ದು, ರೈತರು ಹಾಗೂ ಜನತೆಗೆ ಸಹಕಾರ ನೀಡುವ ಜತೆಗೆ ಸಾಲಸೌಲಭ್ಯಗಳನ್ನು ನೀಡುತ್ತಾ ಬರುತ್ತಿದೆ, ಮಾತ್ರವಲ್ಲದೇ ಸಂಘವೂ ಸಹ ವರ್ಷದಿಂದ ವರ್ಷಕ್ಕೆ ಆರ್ಥಿಕವಾಗಿ ಬೆಳವಣಿಗೆ ಹೊಂದುತ್ತಿದೆ ಎಂದರು.

ಸಂಘದ ಗೋದಾಮು ಶಿಥಿಲಾವ್ಯಸ್ಥೆಯದ್ದು, ನೂತನ ಕಟ್ಟಡ ನಿರ್ಮಾಣ ಮಾಡಲಾಗುವುದು. ಪಟ್ಟಣದಲ್ಲಿಯೇ ಶತಮಾನ ಕಂಡಿರುವ ಏಕೈಕ ಸಂಘವಾಗಿದ್ದು, ಈಗಾಗಲೇ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ಸಹಕಾರ ಸಂಘದ ಬೆಳವಣಿಗೆಗೆ ಪ್ರತಿಯೊಬ್ಬರ ಸಹಕಾರವೂ ಅಗತ್ಯವಿದೆ ಹಾಗೂ ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರ ಕ್ಷೇತ್ರವೂ ಸಹ ಪೂರಕವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಚೀನಾಗೆ ಭಾರತ ಠಕ್ಕರ್! ದೇಶಿ ನಿರ್ಮಿತ ಲಘು ಟ್ಯಾಂಕ್ ಸೇನೆ ಸೇರಲು ಸಜ್ಜು!

ಈ ವೇಳೆ ಶ್ರೀ ರಂಗನಾಥ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಮಹೇಶ್ ಖಾಳೆ, ನಿರ್ದೇಶಕರಾದ ದತ್ತಾತ್ರೇಯ ಪುರಾಣಿಕ್, ನೆಮ್ಮದಿ ಶ್ರೀಧರ್, ಸಂಘದ ಕಾರ್ಯದರ್ಶಿ ಆರ್. ರವಿಕುಮಾರ್, ಆಂತರಿಕ ಲೆಕ್ಕಪರಿಶೋಧಕ ಕೆ. ರಾಜಶೇಖರಪ್ಪ, ಸಿಬ್ಬಂದಿ ಶಿವಕುಮಾರ್ ಸೇರಿದಂತೆ ಇತರರಿದ್ದರು.

Exit mobile version