Site icon Vistara News

Shivamogga News: ಕಾಲುಜಾರಿ ಕೆರೆಗೆ ಬಿದ್ದು ರೈತ ಸಾವು

farmer sathish gowda death fell into the lake at sagara

ಸಾಗರ: ಕಾಲುಜಾರಿ ಕೆರೆಗೆ (Lake) ಬಿದ್ದು ರೈತ (Farmer) ಮೃತಪಟ್ಟಿರುವ ಘಟನೆ ತಾಲೂಕಿನ ಆನಂದಪುರದ ತಾವರೆಹಳ್ಳಿಯಲ್ಲಿ ಸೋಮವಾರ ಜರುಗಿದೆ.

ಸತೀಶ್ ಗೌಡ (51) ಮೃತ ರೈತ. ಇವರು ತಮ್ಮ ಮಗ ಚೇತನ್ ಜತೆ ಎಮ್ಮೆಯನ್ನು ಹುಡುಕಿಕೊಂಡು ಕೆರೆ ದಂಡೆಯ ಮೇಲೆ ಬರುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದಿದ್ದಾರೆ.

ತಕ್ಷಣ ಚೇತನ್ ಅಕ್ಕಪಕ್ಕದವರ ಸಹಾಯ ಕೋರಿದ್ದಾನೆ. ಸ್ಥಳೀಯರು ಬಂದು ರಕ್ಷಣೆ ಮಾಡಿ ಸತೀಶ್ ಗೌಡ ಅವರನ್ನು ಮೇಲೆತ್ತಿ ಆನಂದಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ, ಆಸ್ಪತ್ರೆಗೆ ಕರೆತರುವಷ್ಟರಲ್ಲಿ ರೈತ ಸತೀಶ್ ಗೌಡ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಈ ಕುರಿತು ಚೇತನ್ ನೀಡಿದ ದೂರನ್ನು ದಾಖಲಿಸಿಕೊಂಡ ಆನಂದಪುರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Exit mobile version