Site icon Vistara News

Shivamogga News: ರಿಪ್ಪನ್‌ಪೇಟೆ-ಆನಂದಪುರ ಠಾಣೆಗಳಿಗೆ ನೂತನ ಪೊಲೀಸ್ ವಾಹನಗಳ ಹಸ್ತಾಂತರಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು

MLA Gopalakrishna Belur handed over new police vehicles to Rippanpet Anandpur police stations

ರಿಪ್ಪನ್‌ಪೇಟೆ: ರಿಪ್ಪನ್‌ಪೇಟೆ–ಆನಂದಪುರ ಪೊಲೀಸ್‌ ಠಾಣೆಗಳಿಗೆ ಸೋಮವಾರ ಸಂಜೆ ಸರ್ಕಾರದಿಂದ ಮಂಜೂರಾಗಿದ್ದ ಪೊಲೀಸ್ ಇಲಾಖೆಯ ವಾಹನಗಳನ್ನು (Shivamogga News) ಸಾಗರ -ಹೊಸನಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹಸ್ತಾಂತರಿಸಿದರು.

ಪಟ್ಟಣದ ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ವಾಹನಗಳನ್ನು ಹಸ್ತಾಂತರಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು,‌ ಈ ಠಾಣೆಗಳ ವ್ಯಾಪ್ತಿಯು ದೊಡ್ಡದಿದ್ದು ಈ ಬಗ್ಗೆ ನಾನು ರಾಜ್ಯದ ಗೃಹ ಸಚಿವರಲ್ಲಿ ಪ್ರಸ್ತಾವನೆ ಸಲ್ಲಿಸಿದ್ದ ಹಿನ್ನಲೆಯಲ್ಲಿ ತಕ್ಷಣ ನನ್ನ ಕ್ಷೇತ್ರ ವ್ಯಾಪ್ತಿಯ ಎರಡು ಠಾಣೆಗಳಿಗೆ ಹೊಸ ಪೊಲೀಸ್ ವಾಹನಗಳ ಖರೀದಿಗೆ ಅನುದಾನ ಬಿಡುಗಡೆ ಮಾಡಿ ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತು ಸ್ಪಂದಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಈ ವೇಳೆ ತಿಳಿಸಿದರು. ಹೆಚ್ಚುವರಿ ಎಸ್.ಪಿ. ಅನಿಲ್ ಕುಮಾರ್ ಭೂಮ ರೆಡ್ಡಿ ಮಾತನಾಡಿದರು.

ಇದನ್ನೂ ಓದಿ: Money Guide : ಓಪನ್‌ ಎಂಡೆಡ್‌, ಕ್ಲೋಸ್ಡ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ ಎಂದರೇನು, ಯಾವುದು ಬೆಸ್ಟ್?

ಈ ಸಂದರ್ಭದಲ್ಲಿ ತೀರ್ಥಹಳ್ಳಿ ಡಿ.ವೈ.ಎಸ್.ಪಿ.ಗಜಾನನ ಸುತಾರ್, ಸಾಗರ ಡಿವೈಎಸ್ಪಿ ಗೋಪಾಲ ಕೃಷ್ಣ ಟಿ. ನಾಯ್ಕ, ರಿಪ್ಪನ್‌ಪೇಟೆ ಠಾಣೆಯ ಪಿಎಸ್‌ಐ ಪ್ರವೀಣ್‌ ಕುಮಾರ್ ಎಸ್.ಪಿ., ಆನಂದಪುರ ಠಾಣೆಯ ಪಿಎಸ್‌ಐ ಯುವರಾಜ್, ಹೊಸನಗರ ತಾಲೂಕು ತಹಸೀಲ್ದಾರ್ ರಶ್ಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Exit mobile version