Site icon Vistara News

Shivamogga News : ನಡು ರಸ್ತೆಯಲ್ಲೇ ಹಸುವಿನ ಕಾಲು ಕಡಿದು ಹಾಕಿದ ದುಷ್ಕರ್ಮಿಗಳು

#image_title

ಹೊಸನಗರ : ತಾಲೂಕಿನ ನಿಟ್ಟೂರಿನ ಗೌರಿಕೆರೆಯ(Shivamogga News) ಕೊಡಚಾದ್ರಿ ರಸ್ತೆ ತಿರುವಿನ ಬಳಿ ದುಷ್ಕರ್ಮಿಗಳು ಹಾಡಹಗಲೇ ಹಸುವಿನ ಎರಡೂ ಕಾಲನ್ನು ಕಡಿದು ಹಾಕಿದ ಘಟನೆ ಗುರುವಾರ ನಡೆದಿದೆ.

ಸಿಡ್ಲಕುಣಿ ನಿವಾಸಿ ಸುಭಾಷ್ ಎನ್ನುವವರಿಗೆ ಸೇರಿದ್ದ ಹಸುವನ್ನು ಮೇವಿಗಾಗಿ ಹೊರಗಡೆ ಬಿಡಲಾಗಿತ್ತು. ಸಂಜೆ ಹಸು ಇನ್ನೂ ಹಟ್ಟಿಗೆ ಬಂದಿಲ್ಲ ಎಂದು ಹುಡುಕಿದರೆ ಹಸು ಎರಡೂ ಕಾಲು ಕಡಿದ ಸ್ಥಿತಿಯಲ್ಲಿ ರಸ್ತೆ ಪಕ್ಕದಲ್ಲಿ ಪತ್ತೆಯಾಗಿದೆ. ಈ ನೀಚ ಕೃತ್ಯಕ್ಕೆ ಹಸುವಿನ ಎರಡೂ ಕಾಲುಗಳ ನರ ತುಂಡಾಗಿದ್ದು, ಪಶು ಇಲಾಖೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದುಷ್ಕರ್ಮಿಗಳ ಪತ್ತೆಗೆ ಬಲೆ ಬಿಸಲಾಗಿದೆ. ಸಂಜೆ 5 ಗಂಟೆ ಹೊತ್ತಿಗೆ ದುಷ್ಕರ್ಮಿಗಳು ಈ ಕೃತ್ಯ ನಡೆಸಿರಬಹುದು ಎಂದು ಊಹಿಸಲಾಗಿದೆ.

ಇದನ್ನೂ ಓದಿ: Shivamogga Rural Election Results: ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದೆಗೆ ಕೃಪೆ; ಮತ್ತೆ ಜೆಡಿಎಸ್‌ ತೆಕ್ಕೆಗೆ ಕ್ಷೇತ್ರ
ಎರಡು ತಿಂಗಳ ಹಿಂದೆಯಷ್ಟೇ ಇದೆ ಗೌರೀಕೆರೆಯಲ್ಲಿ ದುಷ್ಕರ್ಮಿಗಳು ಹಸುಗಳನ್ನು ಇನೋವಾ ಕಾರಿನಲ್ಲಿ ತುಂಬಿಕೊಂಡು ಕದ್ದೊಯ್ದ ಪ್ರಕರಣ ನಡೆದಿತ್ತು. ಇದುವರೆಗೂ ಕಳ್ಳತನ ಮಾಡಿದವರು ಯಾರು ಎಂಬುದೇ ಪತ್ತೆಯಾಗಿಲ್ಲ. ಈ ಪ್ರಕರಣ ಹಸಿ ಆಗಿರುವಾಗಲೇ ಮತ್ತೊಂದು ಪ್ರಕರಣ ದಾಖಲಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಸಂಬಂಧಪಟ್ಟ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ ದುಷ್ಕರ್ಮಿಗಳನ್ನು ಹಿಡಿದು, ಮತ್ತೆ ಮತ್ತೆ ಈ ರೀತಿ ಪ್ರಕರಣಗಳು ನಡೆಯದಂತೆ ಜಾಗ್ರತೆ ವಹಿಸಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.

Exit mobile version