Site icon Vistara News

Short Circuit: ಸಾಗರ ಪಟ್ಟಣದಲ್ಲಿ ಆಕಸ್ಮಿಕ ಶಾರ್ಟ್ ಸರ್ಕ್ಯೂಟ್; ಗೊಬ್ಬರ ಅಂಗಡಿಗೆ ಭಾಗಶಃ ಹಾನಿ

Short Circuit sagara Fertilizer shop

#image_title

ಸಾಗರ: ಆಕಸ್ಮಿಕ ಶಾರ್ಟ್ ಸರ್ಕ್ಯೂಟ್‌ನಿಂದ (Short Circuit) ಗೊಬ್ಬರದ ಅಂಗಡಿಯಲ್ಲಿನ ವಸ್ತುಗಳು ಭಸ್ಮವಾಗಿರುವ ಘಟನೆ ಪಟ್ಟಣದ ಸುಭಾಷ್ ನಗರದಲ್ಲಿ ಬುಧವಾರ ನಡೆದಿದೆ. ಎಸ್ಎಚ್ಎಸ್ ಆಗ್ರೋ ಟ್ರೇಡರ್ಸ್‌ನ ಗೀತಾ ಎಂಬುವವರಿಗೆ ಸೇರಿದ ಅಂಗಡಿಯಲ್ಲಿ ಈ ಬೆಂಕಿ ಅವಘಡ ನಡೆದಿದ್ದು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳಿಗೆ ಹಾನಿಯಾಗಿವೆ.

ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ ನೀಡಿ ಬೆಂಕಿಯನ್ನು ನಂದಿಸಿದೆ. ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿ ತಿಮ್ಮಪ್ಪ, ಸಿಬ್ಬಂದಿ ಸಂತೋಷ್, ಸತೀಶ್ ಕುಮಾರ್, ಪ್ರಕಾಶ್ ಇಳಗೆರ್, ಪ್ರಕಾಶ್ ಮರಸ, ಶಿವಾನಂದ್ ಪಾಲ್ಗೊಂಡಿದ್ದರು.

ಇದನ್ನೂ ಓದಿ | ಪುತ್ತಿಗೆ ಸ್ವಾಮೀಜಿ ಕೈಯಲ್ಲಿ ʻಇಸ್ಲಾಂ ಭಯೋತ್ಪಾದನೆಯ ಧರ್ಮವಲ್ಲʼ ಪುಸ್ತಕ; ವಿವಾದಕ್ಕೆ ಶ್ರೀಮಠದ ಸ್ಪಷ್ಟೀಕರಣ ಏನು?

Exit mobile version