Site icon Vistara News

Train service: ಇಂದಿನಿಂದ ಬೆಂಗಳೂರು- ನಂದಿಬೆಟ್ಟಕ್ಕೆ ಚುಕುಬುಕು ರೈಲು; ಪ್ರವಾಸಿಗರು ಫುಲ್‌ ಖುಷ್‌

memu train to nandi hills

ಚಿಕ್ಕಬಳ್ಳಾಪುರ: ನಂದಿ ಬೆಟ್ಟಕ್ಕೆ (Nandi Hill) ಬರುವ ಪ್ರವಾಸಿಗರಿಗೆ ರೈಲ್ವೆ ಇಲಾಖೆಯು ಗುಡ್ ನ್ಯೂಸ್ ಕೊಟ್ಟಿತ್ತು. ನಂದಿ ಬೆಟ್ಟದವರೆಗೆ ಮೆಮು ರೈಲುಗಳ ಸಂಚಾರ (MEMU train service) ವಿಸ್ತರಣೆ ಮಾಡಿತ್ತು. ಈ ನಿಟ್ಟಿನಲ್ಲಿ ಡಿಸೆಂಬರ್ 11 ರಿಂದ ಮೆಮು ರೈಲು ಸೇವೆಯನ್ನು ಆರಂಭಿಸಿದೆ. ಟ್ರಾಫಿಕ್‌ ಜಂಜಾಟವಿಲ್ಲದೇ ಆರಾಮಾಗಿ ನಂದಿಬೆಟ್ಟಕ್ಕೆ ಮೆಮು ರೈಲಿನಲ್ಲೇ ಪ್ರಯಾಣ ಮಾಡಬಹುದು.

ಚಿಕ್ಕಬಳ್ಳಾಪುರಕ್ಕೆ (Chikkaballapura) ಮೆಮು ರೈಲು ವಿಸ್ತರಣೆಯಿಂದ ಪ್ರವಾಸಿಗರು ಮಾತ್ರವಲ್ಲದೇ ಈ ಭಾಗದತ್ತ ಪ್ರಯಾಣಿಸುವ ಪ್ರಯಾಣಿಕರಿಗೂ ಖುಷಿ ತಂದಿದೆ. ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ನಂದಿ ಹಿಲ್ಸ್ ವಿಶ್ವವಿಖ್ಯಾತ ವಾರಾಂತ್ಯದ ತಾಣವಾಗಿದೆ. ಇದೀಗ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಚಿಕ್ಕಬಳ್ಳಾಪುರಕ್ಕೆ‌ ಮೆಮು ರೈಲು ವಿಸ್ತರಣೆ‌ಯಾಗಿದೆ.

ಯಶವಂತಪುರ ಕಂಟೋನ್ಮೆಂಟ್‌ನಿಂದ ಚಿಕ್ಕಬಳ್ಳಾಪುರಕ್ಕೆ ರೈಲು ಸಂಚರಿಸಲಿದೆ. ಯಲಹಂಕ -ಚಿಕ್ಕಬಳ್ಳಾಪುರ ನಡುವಿನ ವಿದ್ಯುದೀಕರಣ 2022 ಮಾರ್ಚ್‌ನಲ್ಲಿ ಮುಕ್ತಾಯವಾಗಿತ್ತು. ಕಾರಣಾಂತರಗಳಿಂದ ಈ ಮಾರ್ಗದಲ್ಲಿ ವಿದ್ಯುತ್ ರೈಲುಗಳ ಸಂಚಾರ ವಿಳಂಬವಾಗಿತ್ತು. ಇದೀಗ ನಂದಿಬೆಟ್ಟದ ತಪ್ಪಲಿನಲ್ಲಿರುವ ನಂದಿ ಗ್ರಾಮದ ನಿಲ್ದಾಣದಲ್ಲಿ ಮೆಮು ರೈಲು ನಿಲುಗಡೆಗೆ ಒಪ್ಪಿಗೆ ನೀಡಲಾಗಿದೆ.

ಇದನ್ನೂ ಓದಿ: Karnataka weather : ಧರ್ಮಸ್ಥಳದಲ್ಲಿ ಅಬ್ಬರಿಸಿರುವ ಮಳೆ; ನಾಳೆಯೂ ಭಾರಿ ವರ್ಷಧಾರೆ!

ಇನ್ನು ನಂದಿ ಹಿಲ್ಸ್‌ಗೆ ಹೋಗುವವರು ಬಹುತೇಕರು ಸೂರ್ಯೋದಯ ನೋಡಲೆಂದು ಹೋಗುತ್ತಾರೆ. ಆದರೆ ಬೆಳಗ್ಗೆ ಹೋಗುವವರಿಗೆ ಈ ಸೇವೆ ಲಭ್ಯವಿರುವುದಿಲ್ಲ. ಇನ್ನು ಸದ್ಗುರು ಜಗ್ಗಿ ವಾಸುದೇವ್‌ ಅವರ ಇಶಾ ಫೌಂಡೇಶನ್ (Isha foundation) ನೋಡಲು ಹೋಗುವ ಪ್ರವಾಸಿಗರಿಗೂ ಈ ಸೇವೆ ಅನುಕೂಲವಾಗಲಿದೆ.

ಇನ್ನು ನಂದಿಬೆಟ್ಟದ ತಳದಲ್ಲಿರುವ ಭೋಗನಂದೀಶ್ವರ ದೇವಾಲಯವು ನಂದಿ ನಿಲ್ದಾಣದಿಂದ ಸುಮಾರು 1.4 ಕಿ.ಮೀ ಇದೆ. ಪ್ರವಾಸಿಗರು ನಂದಿ ಬೆಟ್ಟದ ತುದಿಯನ್ನು ತಲುಪಲು ಹೆಚ್ಚುವರಿಯಾಗಿ 15ರಿಂದ 18 ಕಿ.ಮೀ ಪ್ರಯಾಣಿಸಬೇಕಿದೆ. ಹೀಗಾಗಿ ಪ್ರಯಾಣದ ಸಮಯವನ್ನು ಕಡಿತಗೊಳಿಸಲು ಆದ್ಯತೆ ನೀಡಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಜತೆಗೆ ಬೆಂಗಳೂರಿನಿಂದ ಹೊರಡುವಾಗ ಬೆಟ್ಟಹಲಸೂರು, ದೊಡ್ಡಜಾಲ, ಚನ್ನಸಂದ್ರ ನಿಲ್ದಾಣದಲ್ಲಿ ನಿಲುಗಡೆ ಇಲ್ಲ. ಹೀಗಾಗಿ ಈ ನಿಲ್ದಾಣಗಳಲ್ಲೂ ರೈಲು ನಿಲ್ಲಬೇಕೆಂದು ಒತ್ತಾಯಿಸಿದ್ದಾರೆ.

MEMU ಎಂಬುದು ʼಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ʼ ಎಂಬುದರ ಸಂಕ್ಷಿಪ್ತ ರೂಪ. ಭಾರತೀಯ ರೈಲ್ವೆಯಲ್ಲಿ MEMU ಎಂಬುದು ವಿದ್ಯುಚ್ಚಾಲಿತ ಮಲ್ಟಿಪಲ್ ಯೂನಿಟ್ ರೈಲು. ಇದು ನಗರ ಮತ್ತು ಉಪನಗರ ಪ್ರದೇಶಗಳನ್ನು ಸಂಪರ್ಕಿಸುವ ಸಾಮಾನ್ಯ EMU ರೈಲುಗಳಿಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ಮತ್ತು ಮಧ್ಯಮ ದೂರದ ಮಾರ್ಗಗಳಿಗೆ ಸೇವೆ ಸಲ್ಲಿಸುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version