Site icon Vistara News

Karnataka Election : ತಲೆ ನಿಮ್ಮದು, ಕಲೆ ನಮ್ಮದು; ಪಾವಗಡದಲ್ಲಿ ಕ್ಷೌರಿಕನಿಂದ ಕಾಂಗ್ರೆಸ್‌ ಪರ ವಿಶೇಷ ಪ್ರಚಾರ

ಪಾವಗಡ: ರಾಜ್ಯಾದ್ಯಂತ ಚುನಾವಣೆಯ (Karnataka Election) ರಂಗೇರಿದೆ. ಎಲ್ಲ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಪ್ರಚಾರ ನಡೆಸುತ್ತಿವೆ. ಹೀಗಿರುವಾಗ ಪಾವಗಡದಲ್ಲಿ ಕಾಂಗ್ರೆಸ್‌ ಅಭಿಮಾನಿಯೊಬ್ಬರು ಕೇಶ ಮುಂಡನ ಮೂಲಕವೇ ಪ್ರಚಾರ ನಡೆಸುತ್ತಿದ್ದು, ಎಲ್ಲರ ಗಮನ ಸೆಳೆದಿದೆ.


ಪಾವಗಡ ತಾಲೂಕಿನ ಅರಸೀಕೆರೆ ಗ್ರಾಮದ ನಿವಾಸಿ ಶ್ರೀನಿವಾಸ್‌ ಕಾಂಗ್ರೆಸ್‌ ಅಭಿಮಾನಿ ವೃತ್ತಿಯಲ್ಲಿ ಕ್ಷೌರಿಕ ಆಗಿರುವ ಇವರು ವಿಶೇಷ ರೀತಿಯಲ್ಲಿ ತಮ್ಮ ನೆಚ್ಚಿನ ಪಕ್ಷದ ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆಯವರೆಗೆ ಯಾರು ತಮ್ಮ ತಲೆಯ ಮೇಲೆ ಕಾಂಗ್ರೆಸ್‌ ಪಕ್ಷದ ಚಿಹ್ನೆಯಾದ ಹಸ್ತವನ್ನು ವಿನ್ಯಾಸ ಮಾಡಿಸಿಕೊಳ್ಳುತ್ತಾರೋ ಅವರಿಗೆ ಉಚಿತವಾಗಿ ಕ್ಷೌರ ಮಾಡಿಕೊಡುವುದಾಗಿ ಶ್ರೀನಿವಾಸ್‌ ತಿಳಿಸಿದ್ದಾರೆ.


ಈ ವಿಶೇಷ ಆಫರ್‌ ಪಡೆಯುವುದಕ್ಕೆಂದು ಸಾಕಷ್ಟು ಕಾಂಗ್ರೆಸ್‌ ಕಾರ್ಯಕರ್ತರು ಮುಂದೆ ಬಂದಿದ್ದಾರೆ. ತಲೆ ಮೇಲೆ ಹಸ್ತದ ಚಿಹ್ನೆ, ತಮ್ಮ ನೆಚ್ಚಿನ ಕಾಂಗ್ರೆಸ್‌ ಅಭ್ಯರ್ಥಿ ಹೆಸರು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆ.ವಿ.ವಿ. ಹಾಗೂ ರಾಜ್ಯ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೆಸರುಗಳನ್ನೂ ತಲೆ ಮೇಲೆ ಕೇಶಮುಂಡನೆ ಮಾಡಿಸಿಕೊಳ್ಳುತ್ತಿದ್ದಾರೆ. ಅವರೆಲ್ಲರಿಗೂ ಶ್ರೀನಿವಾಸ್‌ ಉಚಿತವಾಗಿ ಕೇಶಮುಂಡನೆ ಮಾಡಿಕೊಡುತ್ತಿದ್ದಾರೆ ಕೂಡ.


ಅಂದ ಹಾಗೆ ಈ ಶ್ರೀನಿವಾಸ್‌ ಈ ಹಿಂದೆ ಕೂಡ ಅನೇಕ ರೀತಿಯ ಕೇಶ ವಿನ್ಯಾಸಗಳಿಂದ ಹೆಸರುವಾಸಿಯಾಗಿದ್ದರು. ತಲೆ ಮೇಲೆ ಆಂಜನೇಯ, ಭಾರತದ ನಕ್ಷೆ ಬಿಡಿಸುವ ಮೂಲಕ ಅನೇಕ ಯುವಕರಿಗೆ ಫೇವರಿಟ್‌ ಕ್ಷೌರಿಕ ಆಗಿ ಗುರುತಿಸಿಕೊಂಡಿದ್ದರು.

Exit mobile version