Site icon Vistara News

Karnataka Election: ಪಾವಗಡದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟೇಶ್‌ಗೆ ಬೆಂಬಲ ಸೂಚಿಸಿದ ಯಾದವ ಸಮುದಾಯ

#image_title

ಪಾವಗಡ: ಕಾಂಗ್ರೆಸ್ (Karnataka Election) ಅಭ್ಯರ್ಥಿಯಾದ ಎಚ್‌.ವಿ. ವೆಂಕಟೇಶ್ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಯಾದವ ಸಮುದಾಯದವರು ಘೋಷಿಸಿದ್ದಾರೆ. ಪಟ್ಟಣದ ಎಸ್ಎಸ್‌ಕೆ ರಂಗಮಂದಿರದಲ್ಲಿ ಮಂಗಳವಾರ ನಡೆದ ಯಾದವ ಸಮುದಾಯದ ಬೃಹತ್ ಸಭೆಯಲ್ಲಿ ಯಾದವ ಮುಖಂಡರು ಒಮ್ಮತದಿಂದ ನಿರ್ಣಯಕ್ಕೆ ಬಂದಿದ್ದಾರೆ.

ಸಮುದಾಯದ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರಾದ ವೆಂಕಟರಮಣಪ್ಪನವರು ಮಾತನಾಡಿ, “ಯಾದವ್ ಸಮುದಾಯದ ಏಳಿಗೆಗಾಗಿ ಶ್ರಮಿಸಿದ್ದೇನೆ. ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇನೆ. ಹಾಗಾಗಿ ಈ ಬಾರಿಯೂ ನಿಮ್ಮ ಮತವನ್ನು ನನ್ನ ಪುತ್ರ ಅಭ್ಯರ್ಥಿ ಎಚ್.ವಿ. ವೆಂಕಟೇಶ್ ಅವರಿಗೆ ನೀಡಿ ಹಾರೈಸಬೇಕು” ಎಂದು ಮನವಿ ಮಾಡಿದರು.

venkataramanappa congress candidate

ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿಯಾದ ಎಚ್.ವಿ. ವೆಂಕಟೇಶ್ ಮಾತನಾಡಿ, “ರಾಜ್ಯದಲ್ಲಿ ಜೆಡಿಎಸ್ ಪಕ್ಷ ಇಪ್ಪತ್ತರಿಂದ ಇಪ್ಪತೈದು ಸ್ಥಾನ ಮಾತ್ರ ಬರುತ್ತದೆ. ಆದರೆ, ಅವರು ರಾಜ್ಯದಲ್ಲಿ ಈ ಬಾರಿ ನಮ್ಮ ಸರ್ಕಾರ ಬರುತ್ತದೆ ಎಂದು ಬೀಗುತ್ತಿದ್ದಾರೆ. ರಾಜ್ಯದಲ್ಲಿ ಮತ್ತು ಇಲ್ಲಿಯೂ ಸಹ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಮತ್ತೆ ಬಡವರ ಪರ ಕೆಲಸ ಮಾಡುತ್ತದೆ” ಎಂದರು.

ಇದನ್ನೂ ಓದಿ: Karnataka election 2023: ರಾಜ್ಯದಲ್ಲಿ ಜನತೆ ಬಿಜೆಪಿ ಪರವಾಗಿದ್ದಾರೆ: ರಾಜ್ಯಸಭಾ ಸದಸ್ಯ ಸಮೀರ್ ಆರೋನಾ

ಈ ವೇಳೆ ತುಮಕೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ ಗೌಡ, ಮಾಜಿ ಶಾಸಕ ಉಗ್ರ ನರಸಿಂಹಪ್ಪ , ಎಐಸಿಸಿ ವೀಕ್ಷಕರಾದ ಸಂಜಯ್ ದತ್, ಕುಲದೀಪ್, ಕೆಪಿಸಿಸಿ ಸದಸ್ಯ ಕೆ ಎಸ್ ಪಾಪಣ್ಣ, ಯಾದವ ಮುಖಂಡರಾದ ಮುಗದಾಳಬೆಟ್ಟ ನರಸಿಂಹಪ್ಪ, ಕೋಟೆ ಪ್ರಭಾಕರ್, ಚಿಕ್ಕಣ್ಣ, ಭಗವಂತಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ರಾಮಯ್ಯ, ಮಾನಂ ವೆಂಕಟಸ್ವಾಮಿ, ನರಸಿಂಹರೆಡ್ಡಿ, ಮೈಲಾರಪ್ಪ, ದಿವ್ಯ ಆರ್ ಕೆ, ಸುಮಾ, ಉಷಾರಾಣಿ ಸೇರಿ ಇನ್ನೂ ಮುಂತಾದ ಮುಖಂಡರು ಉಪಸ್ಥಿತರಿದ್ದರು.

Exit mobile version