Site icon Vistara News

Tumkur News: ಲೋಕಸಭಾ ಚುನಾವಣೆ; ಸಿಆರ್‌ಪಿಎಫ್ ಯೋಧರು, ಪೊಲೀಸರಿಂದ ಪಥಸಂಚಲನ

lok sabha election pathasanchalana at shira taluk

ಶಿರಾ: ಲೋಕಸಭಾ ಸಾರ್ವತ್ರಿಕ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಶನಿವಾರ ನಿರ್ಭೀತಿಯಿಂದ ಮತ ಚಲಾಯಿಸುವಂತೆ ಸಾರ್ವಜನಿಕರಲ್ಲಿ ಪ್ರೇರೇಪಿಸಲು, ಸಿಆರ್‌ಪಿಎಫ್ ಯೋಧರು ಮತ್ತು ಪೊಲೀಸರಿಂದ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪಥಸಂಚಲನ (Tumkur News) ನಡೆಸಲಾಯಿತು.

ಇದನ್ನೂ ಓದಿ: Karnataka Weather : ಬೆಂಗಳೂರಲ್ಲಿ ಮಳೆ ಮುನಿಸು; ಕರಾವಳಿ, ಮಲೆನಾಡಲ್ಲಿ ಬಿರುಗಾಳಿ ಎಚ್ಚರಿಕೆ

ತಾವರೆಕೆರೆ ಪೊಲೀಸ್‌ ಠಾಣೆಯ ಪಿಎಸ್‌ಐಗಳಾದ ಚಂದ್ರಶೇಖರ್‌, ರವೀಂದ್ರ ಅವರ ನೇತೃತ್ವದಲ್ಲಿ ಸಿಆರ್‌ಪಿಎಫ್‌ ಯೋಧರು, ಪೊಲೀಸರು ತಾವರೆಕೆರೆ, ಸೊರೆಕುಂಟೆ, ಹುಣಸೆಹಳ್ಳಿ, ಬೇವಿನಹಳ್ಳಿ ಸೇರಿದಂತೆ ಇತರೆ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು.

ಇದನ್ನೂ ಓದಿ:TCS World 10K : ಬೆಂಗಳೂರು ಮ್ಯಾರಾಥಾನ್​ನಲ್ಲಿ ವಿಶ್ವದ ಅತಿ ವೇಗದ ಓಟಗಾರ್ತಿ ಅನ್ಯಂಗೊ ಭಾಗಿ

ಈ ಸಂದರ್ಭದಲ್ಲಿ ತಾವರೆಕೆರೆ ಗ್ರಾಮ ಪಂಚಾಯಿತಿ ಪಿಡಿಒ ನಾಗರಾಜ ಹುಣಸೆಹಳ್ಳಿ, ಬೇವಿನಹಳ್ಳಿ ಪಿಡಿಒ ಕನಕಪ್ಪ, ಪಿಡಿಒ ವಿಜಯ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version