Site icon Vistara News

Tumkur News: ಮರಡಿ ಗುಡ್ಡದಲ್ಲಿ ಶ್ರೀ ಗರುಡ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ

Shri Garuda devara PraanaPratisthe programme at Maradi Gudda

ಶಿರಾ: ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಮರಡಿ ಗುಡ್ಡದ ಶ್ರೀ ಮರಡಿ ರಂಗನಾಥಸ್ವಾಮಿಯ ದೇವಸ್ಥಾನದ ಮುಖ್ಯದ್ವಾರದ ಬಳಿ ಶ್ರೀ ಗರುಡ ದೇವರ ಪ್ರಾಣ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ ಮಹೋತ್ಸವ ಶುಕ್ರವಾರ (Tumkur News) ಜರುಗಿತು.

ಶ್ರೀ ಗರುಡ ದೇವರ ಪ್ರಾಣ ಪ್ರತಿಷ್ಠೆ ಅಂಗವಾಗಿ ಮೂಲದೇವರ ಪ್ರಾರ್ಥನೆ, ಗಣಪತಿ ಪೂಜೆ, ಗಂಗಾಪೂಜೆ, ಸಂಕಲ್ಪ, ಕಳಸ ಸ್ಥಾಪನೆ, ವೇದಿಕಾರ್ಚನೆ, ಗಣಪತಿ ಹೋಮ, ನವಗ್ರಹ ಹೋಮ, ಪ್ರತಿಷ್ಠಾಂಗ ಹೋಮ, ನೂತನ ಶಿಲಾ ವಿಗ್ರಹಕ್ಕೆ ಜಲಾಧಿವಾಸ, ಪುಷ್ಪಾಧಿವಾಸ, ಪಂಚಗವ್ಯ ಅಭಿಷೇಕ, ಪಂಚಾಮೃತ ಅಭಿಷೇಕ, ಸೇರಿದಂತೆ ಮೂಲದೇವರಿಗೆ ಕುಂಭಾಭಿಷೇಕ, ಗರುಡ ದೇವರಿಗೆ ಕುಂಭಾಭಿಷೇಕ ಮತ್ತು ಮಹಾ ಅಭಿಷೇಕವನ್ನು ನೆರವೇರಿಸಲಾಯಿತು.

ಇದನ್ನೂ ಓದಿ: Gold Rate Today: ಇಂದು ಚಿನ್ನದ ಬೆಲೆಯಲ್ಲಿ ತುಸು ಇಳಿಕೆ; ಖರೀದಿಸುವ ಮುನ್ನ ಇಲ್ಲಿ ದರ ಗಮನಿಸಿ

ಬೆಂಗಳೂರಿನ ಟಿ.ಕೆ. ಶಾಮಸುಂದರ್ ದೀಕ್ಷಿತರು, ಕೆ.ಎಸ್.ಎನ್. ದೀಕ್ಷಿತ್‌ ಅವರ ಪೌರೋಹಿತ್ಯದಲ್ಲಿ ದೇವತಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು.

ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾದಿಗಳು ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: Mahua Moitra : ಟಿಎಂಸಿ ನಾಯಕಿ ಮಹುವಾ ಮನೆ ಮೇಲೆ ಸಿಬಿಐ ರೇಡ್​

ಕಾರ್ಯಕ್ರಮದಲ್ಲಿ ಮೂಗನಹಳ್ಳಿ ಶ್ರೀ ಅಮ್ಮಾಜಿ ಕಾವಲೇಶ್ವರಿ ದೇವಸ್ಥಾನದ ಶ್ರೀ ನಿತ್ಯಾನಂದ ಸ್ವಾಮಿ ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮುಖಂಡರು ಹಾಗೂ ಇತರರು ಪಾಲ್ಗೊಂಡಿದ್ದರು.

Exit mobile version