Site icon Vistara News

Tumkur News: ಗುಬ್ಬಿಯ ಶ್ರೀ ವಿನಾಯಕ ಮೂರ್ತಿಗೆ ಅಡಿಕೆ ಗೊನೆಗಳಿಂದ ವಿಶೇಷ ಅಲಂಕಾರ, ಪೂಜೆ

Special Puja to Shree Vinayaka Murthy of Gubbi

ಗುಬ್ಬಿ: ಪಟ್ಟಣದ ಅಮರಗೊಂಡ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ದೇಶದ ಶ್ರೀ ಸತ್ಯಗಣಪತಿ ಯುವಕರ ಸಂಘದ ವತಿಯಿಂದ ಶ್ರೀ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲಾಗಿರುವ ಶ್ರೀ ವಿನಾಯಕ ಮೂರ್ತಿಗೆ ಸೋಮವಾರ ವಿಶೇಷವಾಗಿ ಸುಮಾರು 150 ಕ್ಕೂ ಹೆಚ್ಚು ಅಡಿಕೆ (Betelnut) ಗೊನೆಗಳಿಂದ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು.

ದೇಶದ ಶ್ರೀ ಸತ್ಯ ಗಣಪತಿ ಯುವಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಅರ್ಜುನ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ತೆಂಗು, ಅಡಿಕೆ ಪ್ರಮುಖ ಬೆಳೆಯಾಗಿದ್ದು ಶ್ರೀ ಗಣೇಶ ಮೂರ್ತಿಗೆ ಸುಮಾರು 150ಕ್ಕೂ ಹೆಚ್ಚು ಅಡಿಕೆಗೊನೆಗಳಿಂದ ಅಲಂಕಾರ ಮಾಡಿದ್ದು, ಹೆಚ್ಚಿನ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ, ಇನ್ನು ಎರಡು ದಿನಗಳ ಕಾಲ ದೇವರಿಗೆ ಅಡಿಕೆ ಗೊನೆಯ ಅಲಂಕಾರ ಇರಲಿದ್ದು, ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ವಿಶೇಷ ಪೂಜೆ ಅಂಗವಾಗಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: Job Alert: ಬರೋಬ್ಬರಿ 75,768 ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ನ.24ರಿಂದ ಅರ್ಜಿ ಸಲ್ಲಿಸಿ!

ಈ ಸಂದರ್ಭದಲ್ಲಿ ಸಂಘದ ಯಶವಂತ, ಮಂಜುನಾಥ್, ರಂಗನಾಥ್, ಮಾರುತಿ, ಅನಿಲ್, ಯೋಗೇಶ್, ರಂಗರಾಜು, ರವಿಕಿರಣ್, ಶಂಕರ್, ಮುರಳಿ ಕೃಷ್ಣ ಸೇರಿದಂತೆ ಸಂಘದ ಇತರೆ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

Exit mobile version