Site icon Vistara News

Tumkur News: ಶಿರಾದಲ್ಲಿ ಶ್ರೀರಂಗನಾಥಸ್ವಾಮಿಯ ಕುಂಭಾಭಿಷೇಕ; ಶಾಸಕ ಟಿ.ಬಿ. ಜಯಚಂದ್ರ ಭಾಗಿ

Shira MLA T B Jayachandra visit Sriranganathswamy temple

ಶಿರಾ: ತಾಲೂಕಿನ ಹುಲಿಕುಂಟೆ ಹೋಬಳಿಯ ಕ್ಯಾದಿಗುಂಟೆ ಗ್ರಾಮದಲ್ಲಿ ಶ್ರೀರಂಗನಾಥ ಸ್ವಾಮಿ (Sri Ranganatha Swami) ದೇವರ ಕುಂಭಾಭಿಷೇಕ ಮತ್ತು ಗ್ರಾಮದ ಅಭಿವೃದ್ಧಿಗಾಗಿ (Development) ಹೋಮ ಹವನ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕ್ಷೇತ್ರದ ಶಾಸಕ ಟಿ.ಬಿ. ಜಯಚಂದ್ರ ಅವರು ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ಕಾರ್ಯಕ್ರಮದಲ್ಲಿ ಭಾಗಿಯಾದರು.

ಇದನ್ನೂ ಓದಿ: Darbar Movie Review: ಇದು ರಾಜಕಾರಣದ ʻದರ್ಬಾರ್‌ʼ, ಮತದಾರರ ಕಾರುಬಾರು!

ಬಳಿಕ ಮಾತನಾಡಿದ ಶಾಸಕ ಟಿ.ಬಿ. ಜಯಚಂದ್ರ, ನಾವು ಹೆಚ್ಚು ಕಷ್ಟದಲ್ಲಿದ್ದಾಗ “ಸಂಕಟ ಬಂದಾಗ ವೆಂಕಟ ರಮಣ“ ಎಂಬ ಗಾದೆಯಂತೆ ದೇವರಲ್ಲಿ ಮೊರೆ ಹೋಗುತ್ತೇವೆ. ಹರಕೆಗಳನ್ನು ಕಟ್ಟಿಕೊಳ್ಳುತ್ತೇವೆ, ಮುಡುಪು ಕಟ್ಟಿಡುತ್ತೇವೆ, ಕಾಣಿಕೆಗಳನ್ನು ಸಮರ್ಪಿಸುತ್ತೇವೆ. ಇದು ನಾವು ದೇವರ ಮೇಲೆ ಭಾವನಾತ್ಮಕವಾಗಿ ಹೊಂದಿರುವ ಅಪಾರ ನಂಬಿಕೆಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಸಿ.ಆರ್. ಉಮೇಶ್, ಗ್ರಾಮದ ಮುಖಂಡ ರಂಗನಾಥ್ ಗೌಡ ಸೇರಿದಂತೆ ದೇವಸ್ಥಾನದ ಭಕ್ತಾದಿಗಳು ಹಾಜರಿದ್ದರು.

Exit mobile version