Site icon Vistara News

Drowned in Canal | ಕಾಲುವೆಯಲ್ಲಿನ ಮೋಟಾರ್‌ಗೆ ನೀರು ಹಾಕಲು ಹೋದಾಗ ಕಾಲು ಜಾರಿ ಬಿದ್ದು ಇಬ್ಬರು ನೀರುಪಾಲು

Two persons drowned in ganga river

ವಿಜಯಪುರ: ಕಾಲುವೆಯಲ್ಲಿದ್ದ ನೀರೆತ್ತುವ ಮೋಟಾರ್‌ಗೆ ನೀರು ಹಾಕಲು ಹೋದಾಗ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು (Drowned in canal) ಮೃತಪಟ್ಟಿದ್ದಾರೆ. ಇನ್ನೊಬ್ಬರು ನಾಪತ್ತೆಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಜಾಕವೆಲ್ ದೊಡ್ಡ ಕಾಲುವೆಯಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟಿರುವ ದುರ್ದೈವಿಯನ್ನು ಶೇಖಪ್ಪ ಡೆಂಗಿ (40) ಎಂದು ಗುರುತಿಸಲಾಗಿದೆ. ಅಶೋಕ ಅಂಗಡಿಗೇರಿ (45) ಎಂಬವರು ನಾಪತ್ತೆಯಾಗಿದ್ದಾರೆ.

ಶೇಖಪ್ಪ ಮತ್ತು ಅಶೋಕ ಅಂಗಡಿಗೇರಿ ಅವರು ಕಾಲುವೆಯಲ್ಲಿರುವ ಮೋಟರ್‌ಗೆ ನೀರು ಹಾಕಲು ಇಳಿದಿದ್ದರು. ಕೆಲಸ ಮಾಡುವಾಗ ನೀರಿನ ಇಳಿಜಾರಿಗೆ ಕಾಲು ಜಾರಿ ಬಿದ್ದಿದ್ದಾರೆ. ಒಬ್ಬರು ಬಿದ್ದಾಗ ಇನ್ನೊಬ್ಬರು ಆಧರಿಸಲು ಹೋಗಿ ಇಬ್ಬರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸ್ಥಳೀಯರು ಧಾವಿಸಿ ಶೇಖಪ್ಪ ಡೆಂಗಿ ಅವರ ಮೃತದೇಹವನ್ನು ಮೇಲಕ್ಕೆತ್ತಿದರು. ನಾಪತ್ತೆಯಾಗಿರುವ ಅಶೋಕ ಅಂಗಡಿಗೇರಿಗಾಗಿ ಹುಡುಕಾಟ ಆರಂಭವಾಗಿದೆ.

ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿ ಸಹಕಾರದೊಂದಿಗೆ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ | Youth drowned | ಶಿಂಷಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕ ನೀರುಪಾಲು

Exit mobile version