Site icon Vistara News

Udupi News: ಕುಂದಾಪುರ ಉಪ ವಿಭಾಗಕ್ಕೆ ನೂತನ ಸಹಾಯಕ ಆಯುಕ್ತರಾಗಿ ರಶ್ಮಿ ಅಧಿಕಾರ ಸ್ವೀಕಾರ

Rashmi SR Assistant Commissioner Kundapur

#image_title

ಉಡುಪಿ: ಕುಂದಾಪುರ ಉಪ ವಿಭಾಗದ ನೂತನ ಸಹಾಯಕ ಆಯುಕ್ತರಾಗಿ ರಶ್ಮಿ ಎಸ್.ಆರ್. ಅವರು ಅಧಿಕಾರ ಸ್ವೀಕರಿಸಿದರು.

ಮಂಗಳೂರು ಮೂಲದ ರಶ್ಮಿ ಎಸ್. ಆರ್. ಅವರು 2014ನೇ ಬ್ಯಾಚಿನ ಕೆಎಎಎಸ್ ಅಧಿಕಾರಿ. 2017ರಲ್ಲಿ ಮಂಗಳೂರಿನಲ್ಲಿ ಪ್ರೊಬೆಷನರಿ ಅವಧಿ ಮುಗಿಸಿ, 2019 ರಲ್ಲಿ ಬಂಟ್ವಾಳ ತಹಸೀಲ್ದಾರ್ ಆಗಿ ನೇಮಕಗೊಂಡಿದ್ದರು. ಈ ಮಧ್ಯೆ ಲೋಕಸಭಾ ಹಾಗೂ ಗ್ರಾ.ಪಂ. ಚುನಾವಣೆ ವೇಳೆ ಕಾಪು ತಹಸೀಲ್ದಾರ್ ಆಗಿಯೂ ಸೇವೆ ಸಲ್ಲಿಸಿ, ಬಳಿಕ ಬಂಟ್ವಾಳಕ್ಕೆ ವಾಪಸಾಗಿದ್ದರು. 2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಪದೋನ್ನತಿ ಹೊಂದಿದ್ದು, ಈಗ ಕುಂದಾಪುರ ಎಸಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: Magha Purnima 2023 : ಹುಣ್ಣಿಮೆಯ ನಾಳೆ ನಾಲ್ಕು ಶುಭ ಯೋಗಗಳ ಸಂಯೋಗ; ಏನಿದರ ಲಾಭ?

ಕಳೆದ ಮೂರು ವರ್ಷಗಳಿಂದ ಕುಂದಾಪುರ ಎಸಿಯಾಗಿದ್ದ ಕೆ. ರಾಜು ಅವರು ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ.

Exit mobile version