Site icon Vistara News

ಕಾನ್ಸ್‌ಟೇಬಲ್‌ ಆತ್ಮಹತ್ಯೆಗೆ ಸಹೋದ್ಯೋಗಿಗಳ ಕಿರುಕುಳ ಕಾರಣ?

ಉಡುಪಿ: ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಭದ್ರತಾ ಕರ್ತವ್ಯಕ್ಕೆ ನಿಯೋಜನೆಯಾಗಿ ಏಪ್ರಿಲ್‌ 29ರಂದು ಸರ್ವೀಸ್‌ ರಿವಾಲ್ವರ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಹೆಡ್‌ ಕಾನ್ಸ್‌ಟೇಬಲ್‌ ರಾಜೇಶ್‌ ಕುಂದರ್‌ ಹತ್ಯೆಗೆ ಹೊಸ ತಿರುವು ಸಿಕ್ಕಿದೆ.ರಾಜೇಶ್‌ ಕುಂದರ್‌ ಅವರದ್ದು ಎನ್ನಲಾದ ವಾಯ್ಸ್‌ ರೆಕಾರ್ಡ್‌ ಪೊಲೀಸರಿಗೆ ಪತ್ತೆ ಆಗಿದೆ.

ರಾಜ್ಯಾದ್ಯಂತ ಹಿಜಾಬ್‌ ವಿವಾದ ನಡೆಯುತ್ತಿದ್ದ ಸಂದರ್ಭದಲ್ಲಿ ರಾಜೇಶ್‌ ಕುಂದರ್‌ನನ್ನು ಗಂಗೊಳ್ಳಿಯಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಇದೇ ಸ್ಥಳದಲ್ಲಿ, ಸಹೋದ್ಯೋಗಿಗಳಾದ ಅಶ್ಫಾಕ್‌ ಹಾಗೂ ಉಮೇಶ್‌ ನಿಯೋಜನೆಯಾಗಿದ್ದರು. ಆದರೆ ಇಬ್ಬರೂ  ಹೇಳದೇ ಕೇಳದೆ ಕರ್ತವ್ಯಕ್ಕೆ ಗೈರಾದರು. ಈ ಬಗ್ಗೆ DAR ಹೆಡ್‌ಕ್ವಾರ್ಟರ್‌ಗೆ ರಾಜೇಶ್‌ ದೂರು ನೀಡಿದ್ದರು. ಈ ಕಾರಣಕ್ಕಾಗಿ ಇಲಾಖೆಯ ಸಹವರ್ತಿಗಳಿದ ಹಿಂಸೆಗೆ ಒಳಗಾಗಿದ್ದೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ನಡೆಸಲಾಗುತ್ತಿದ್ದು, ಆಡಿಯೋ ಸತ್ಯಾಸತ್ಯತೆ ತಿಳಿಯಲಾಗುತ್ತದೆ. ಸದ್ಯ ವಾಯ್ಸ್‌ ರಾಕರ್ಡ್‌ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version